Advertisement

ಜ್ಯುವೆಲ್ಲರಿ ಅಂಗಡಿ ಮುಂಭಾಗ 20 ಗಂಟೆ ಲೇಖಕಿ ಪ್ರತಿಭಟನೆ: ಕೊನೆಗೂ ಕ್ಷಮೆ ಕೇಳಿದ ಮಾಲೀಕ!

04:52 PM Oct 09, 2020 | Nagendra Trasi |

ಮುಂಬೈ: ಮರಾಠಿ ಲೇಖಕಿ ಶೋಭಾ ದೇಶ್ ಪಾಂಡೆ ಅವರು ಮುಂಬೈನ ಜ್ಯುವೆಲ್ಲರಿ ಅಂಗಡಿ ಮುಂಭಾಗದಲ್ಲಿ ಸುಮಾರು 20 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದ ಘಟನೆ ನಡೆದಿತ್ತು. ಇದಕ್ಕೆ ಕಾರಣ ಜ್ಯುವೆಲ್ಲರಿ ಶಾಪ್ ಮಾಲೀಕ ಮರಾಠಿಯಲ್ಲಿ ಮಾತನಾಡುವುದಕ್ಕೆ ನಿರಾಕರಿಸಿದ್ದು!

Advertisement

ಶೋಭಾ ದೇಶ್ ಪಾಂಡೆ ಕಿವಿಯೋಲೆ ಖರೀದಿಸಲು ಚಿನ್ನದ ಅಂಗಡಿಗೆ ಭೇಟಿ ನೀಡಿದ್ದರು. ಆದರೆ ಈ ವೇಳೆ ಮಾಲೀಕ ಹಿಂದಿಯಲ್ಲಿ ಮಾತನಾಡಿದ್ದರು. ಏತನ್ಮಧ್ಯೆ ಮರಾಠಿಯಲ್ಲಿ ಮಾತನಾಡುವಂತೆ ಶೋಭಾ ತಾಕೀತು ಮಾಡಿದಾಗ ಶಾಪ್ ನಿಂದ ಹೊರನಡೆಯುವಂತೆ ಸೂಚಿಸಿದ್ದು ಜಟಾಪಟಿಗೆ ಕಾರಣವಾಗಿರುವುದಾಗಿ ವರದಿ ತಿಳಿಸಿದೆ.

ಇದರಿಂದ ಆಕ್ರೋಶಗೊಂಡ ಶೋಭಾ ದೇಶ್ ಪಾಂಡೆ ಗುರುವಾರ ಸಂಜೆಯಿಂದ ಜ್ಯುವೆಲ್ಲರಿ ಶಾಪ್ ನ ಹೊರಭಾಗದ ಫೂಟ್ ಪಾತ್  ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು. ನಂತರ ಶುಕ್ರವಾರ ಜ್ಯುವೆಲ್ಲರ್ ಶಾಪ್ ಮಾಲೀಕ ಶಂಕರ್ ಲಾಲ್ ಜೈನ್ ಶೋಭಾ ದೇಶ್ ಪಾಂಡೆ ಜತೆ ಕ್ಷಮೆಯಾಚಿಸಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ: ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !

ಶೋಭಾ ದೇಶಪಾಂಡೆ ಪ್ರತಿಭಟನೆಗೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) ಬೆಂಬಲ ಸೂಚಿಸಿತ್ತು. ಅಷ್ಟೇ ಅಲ್ಲ ಕ್ಷಮೆ ಕೇಳದಿದ್ದರೆ ಶಂಕರ್ ಲಾಲ್ ಜೈನ್ ಮರಾಠಿ ಕಲಿಯುವವರೆಗೂ ಜ್ಯುವೆಲ್ಲರಿ ಅಂಗಡಿ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next