Advertisement

ದಾವಣಗೆರೆ ಕ್ರೀಡಾನಿಲಯದ ಕುಸ್ತಿಪಟುಗಳ ಸಾಧನೆ

12:55 PM Feb 22, 2017 | Team Udayavani |

ದಾವಣಗೆರೆ: ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಈಚೆಗೆ ಮುಕ್ತಾಯಗೊಂಡ ರಾಜ್ಯ ಒಲಂಪಿಕ್‌ Õನಲ್ಲಿ ದಾವಣಗೆರೆ ಕ್ರೀಡಾನಿಲಯದ ಕುಸ್ತಿ ತರಬೇತಿ ಕೇಂದ್ರದ ಕುಸ್ತಿಪಟುಗಳು 6 ಚಿನ್ನ, 4 ಬೆಳ್ಳಿ, 7 ಕಂಚಿನ ಪದಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. 

Advertisement

59 ಕೆಜಿ ವಿಭಾಗದಲ್ಲಿ ಪ್ರಭಾಕರ ಪಳಕೆ, 65 ಕೆಜಿ ವಿಭಾಗದಲ್ಲಿ ಎನ್‌. ಮಂಜುನಾಥ್‌, 70 ಕೆಜಿ ವಿಭಾಗದಲ್ಲಿ ಎಸ್‌. ಸುನೀಲ್‌, 74 ಕೆಜಿ ವಿಭಾಗದಲ್ಲಿ ಇ. ಶ್ರೀನಿವಾಸ್‌, 85 ಕೆಜಿ ವಿಭಾಗದಲ್ಲಿ ಎಲ್‌. ಆನಂದ್‌, 96 ಕೆಜಿ ವಿಭಾಗದಲ್ಲಿ ಎಸ್‌. ಕಿರಣ್‌ ಚಿನ್ನದ ಪದಕ ಪಡೆದಿದ್ದಾರೆ. 

75 ಕೆಜಿ ವಿಭಾಗದಲ್ಲಿ ಹನುಮಂತ್‌ ಚಿನ್ನಾಳ್‌, 96+ ಕೆಜಿ ವಿಭಾಗದಲ್ಲಿ ಶ್ರೀಶೈಲ, 96 ಕೆಜಿ ವಿಭಾಗದಲ್ಲಿ ಮಧುಸೂಧನ್‌, 75 ಕೆಜಿ ವಿಭಾಗದಲ್ಲಿ ಚಂದ್ರಶೇಖರ್‌ ಬೆಳ್ಳಿ, 60 ಕೆಜಿ ವಿಭಾಗದಲ್ಲಿ ಎನ್‌. ರಾಜೇಶ್‌, 96 ಕೆಜಿ ವಿಭಾಗದಲ್ಲಿ ಎಂ.ವೈ. ಪಾಟೀಲ್‌, 65 ಕೆಜಿ ವಿಭಾಗದಲ್ಲಿ ಡಿ. ಆಕಾಶ್‌,

86 ಕೆಜಿ ವಿಭಾಗದಲ್ಲಿ ರಂಗನಾಥ್‌, 96 ಕೆಜಿ ವಿಭಾಗದಲ್ಲಿ ಮೊಹಮ್ಮದ್‌ ಅಲಿ, 75 ಕೆಜಿ ವಿಭಾಗದಲ್ಲಿ ಎಸ್‌. ಲಕ್ಷ್ಮಣ್‌, 65 ಕೆಜಿ ವಿಭಾಗದಲ್ಲಿ ಡಿ. ರಾಮ್‌ ಕುಮಾರ್‌ ಕಂಚು ಪದಕ ಪಡೆದಿದ್ದಾರೆ. ಭಾರ ಎತ್ತುವ ಸ್ಪರ್ಧೆಯ 65 ಕೆಜಿ ವಿಭಾಗದಲ್ಲಿ ಎಸ್‌. ಕೃಷ್ಣ ಬೆಳ್ಳಿ, 96 ಕೆಜಿ ವಿಭಾಗದಲ್ಲಿ ರಘು ರಾಯ್ಕರ್‌ ಕಂಚು ಪದಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.  

Advertisement

Udayavani is now on Telegram. Click here to join our channel and stay updated with the latest news.

Next