Advertisement

ಅಪ್ಪು ಹೆಸರಲ್ಲಿ ಯುವಕರ ಸಾರ್ಥಕ ಕೆಲಸ

02:24 PM Oct 31, 2022 | Team Udayavani |

ನೆಲಮಂಗಲ: ಪುನೀತ್‌ ರಾಜ್‌ಕುಮಾರ್‌ ಮೊದಲ ವರ್ಷದ ಪುಣ್ಯಸ್ಮರಣೆಗೆ ಹನುಮಂತೇಗೌಡನಪಾಳ್ಯದ ಯುವಕರು ರಸ್ತೆ ಗುಂಡಿ ಮುಚ್ಚಿ ಸಾರ್ಥಕ ಕೆಲಸ ಮಾಡಿದ್ದಾರೆ.

Advertisement

ತಾಲೂಕಿನ ಶ್ರೀನಿವಾಸಪುರ ಗ್ರಾಪಂನ ಹನುಮಂತೇಗೌಡನಪಾಳ್ಯ ಗ್ರಾಮದ ಯುವಕರು ಪುನೀತ್‌ ರಾಜ್‌ಕುಮಾರ್‌ ಪುಣ್ಯಸ್ಮರಣೆ ಹಿನ್ನೆಲೆ, ಅಪ್ಪುವಿಗೆ ಪ್ರಿಯವಾಗಿದ್ದ ಬಿರಿಯಾನಿ ಊಟ ತಯಾರಿಸಿ 300ಕ್ಕೂ ಹೆಚ್ಚು ಜನರಿಗೆ ವಿತರಣೆ ಮಾಡಿದ್ದಾರೆ.

ಗುಂಡಿ ಮುಚ್ಚಿ ಸಾರ್ಥಕ ಕೆಲಸ: ಶಿವಗಂಗೆ ರಸ್ತೆ ಯಲ್ಲಿ ಬಹಳಷ್ಟು ಗುಂಡಿಗಳು ಬಿದ್ದು ದಿನನಿತ್ಯ ವಾಹನ ಸವಾರರು ರಸ್ತೆಯಲ್ಲಿ ಹೋಗಲು ಪರ ದಾಡುತ್ತಿದ್ದರು. ಹನುಮಂತೇಗೌಡನಪಾಳ್ಯದ ಯುವಕರು ಪುನೀತ್‌ ಪುರಣ್ಯಸ್ಮರಣೆ ದಿನ ರಸ್ತೆ ಗುಂಡಿ ಮುಚ್ಚಿದ್ದಾರೆ. ಪುನೀತ್‌ ಸೇವೆಯನ್ನು ನೆನೆದ ಯುವಕರು, ಅವರು ರಾಜ್ಯದಲ್ಲಿ ಬಹಳಷ್ಟು ಸಹಕಾರ ಮಾಡಿದ್ದಾರೆ. ಅವರ ಹೆಸರಿನಲ್ಲಿ ನಾವು ಸಮಾಜಕ್ಕೆ ಕೆಲವೊಂದು ಸೇವೆ ಮಾಡುವುದು ನಮ್ಮ ಹೊಣೆ ಎಂದರು.

ಮುಖಂಡ ಬೆಟ್ಟಸ್ವಾಮಿ, ಅನಿಲ್‌ಕುಮಾರ್‌, ಗಿರೀಶ್‌, ರಾಜಗೋಪಾಲ್‌, ಶ್ರೀನಿವಾಸ್‌, ಮಂಜು ನಾಥ್‌, ನರಸಿಂಹಮೂರ್ತಿ, ದಿನೇಶ್‌, ವಸಂತ್‌ಕುಮಾರ್‌, ಅರುಣ್‌ಕುಮಾರ್‌, ಆನಂದ್‌, ಲೋಕೇಶ್‌, ಗಂಗರಾಜು, ಅವಿನಾಶ್‌, ರವಿಕುಮಾರ್‌, ಯತೀಶ್‌, ದಿನೇಶ್‌, ನಾಗರಾಜು, ಹುಚ್ಚಹನುಮೇಗೌಡ, ಗಂಗ ಯ್ಯ, ವೆಂಕಟಪ್ಪ, ಕಲುವೀರಯ್ಯ, ಹೆಚ್ಚರಾಮಯ್ಯ, ವೆಂಕಟರಾಮಯ್ಯ, ನವೀನ್‌, ಹನುಮಂತರಾಜು, ಆದರ್ಶ, ರವಿಕುಮಾರ್‌ ಹಾಗೂ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next