Advertisement

ಸ್ವಾಸ್ಥ್ಯ ಜೀವನಕ್ಕೆ ಯೋಗ: ಶೋಭಾ ಶೆಟ್ಟಿ

12:00 AM Jun 22, 2019 | Sriram |

ಉಡುಪಿ: ಯೋಗದಿಂದ ಚೈತನ್ಯ ಮೂಡಿ ಬದುಕಿನುದ್ದಕ್ಕೂ ಆರೋಗ್ಯಯುತ ಜೀವನ ನಡೆಸ ಬಹುದು ಎಂದು ಪುಣೆಯ ರಮಾಮಣಿ ಅಯ್ಯಂಗಾರ್‌ ಮೆಮೋರಿಯಲ್ ಯೋಗ ತರಬೇತುದಾರರಾದ ಶೋಭಾ ಶೆಟ್ಟಿ ಹೇಳಿದರು.

Advertisement

ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್‌ ಅಕೌಂಟೆಂಟ್ಸ್‌ ಆಫ್ ಇಂಡಿಯಾ ಉಡುಪಿ ಶಾಖೆಯ ವತಿಯಿಂದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಎನ್‌.ಎಸ್‌.ಎಸ್‌. ಘಟಕದ ಸಹಯೋಗದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ| ಮಧುಸೂದನ್‌ ಭಟ್ ಯೋಗ ದಿನಾಚರಣೆಯನ್ನು ಉದ್ಘಾಟಿಸಿದರು.

ಯೋಗ ತರಬೇತುದಾರರಾದ ಸಂಧ್ಯಾ ಕಾಮತ್‌, ಸುಚಿತ್ರಾ ಯೋಗಾ ಭ್ಯಾಸವನ್ನು ಪ್ರಾಯೋಗಿಕವಾಗಿ ನಡೆಸಿಕೊಟ್ಟರು. ಉಡುಪಿ ಶಾಖೆಯ ಕಾರ್ಯದರ್ಶಿ ಸಿ.ಎ. ಕವಿತಾ ಎಂ.ಪೈ ಉಪಸ್ಥಿತರಿದ್ದರು.

ಸಿ.ಎ ಉಡುಪಿ ಶಾಖೆಯ ಅಧ್ಯಕ್ಷ‌ ಸಿ.ಎ. ನರಸಿಂಹ ನಾಯಕ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎ. ಪ್ರದೀಪ ಜೋಗಿ, ಸಿ.ಎ. ಲೋಕೇಶ್‌ ಶೆಟ್ಟಿ ಪರಿಚಯಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್‌ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next