Advertisement

ಕರ ವಸೂಲಿಗಾರ್ತಿಗೆ ಸೀಮಂತ ಕಾರ್ಯ ನಡೆಸುವ ಮೂಲಕ ವಿಶ್ವ ಹೆಣ್ಣು ಮಕ್ಕಳ ದಿನ ಆಚರಣೆ

04:40 PM Jan 24, 2022 | Team Udayavani |

ಸಾಗರ: ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯನ್ನು ತಾಲೂಕಿನ ಆವಿನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿಯ ಕರವಸೂಲಿಗಾರರಾದ ನಾಗರತ್ನ ಅವರಿಗೆ ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸೇರಿ ವಿವಿಧ ಹಣ್ಣು, ಸಿಹಿತಿನಿಸುಗಳನ್ನು ನೀಡಿ, ಆರತಿ ಬೆಳಗಿ ಸೀಮಂತ ಕಾರ್ಯಕ್ರಮವನ್ನೇ ನಡೆಸಿ ಹರಸಿದರು.

Advertisement

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕಾಂತರಾಜ್, ಉಪಾಧ್ಯಕ್ಷರಾದ ಸಫಿಯಾ, ಸದಸ್ಯರಾದ ಶಶಿಕಲಾ, ಸುಜಾತ, ಸವಿತಾ, ಇಂದಿರಾ, ಅಶೋಕ್, ಎಂ. ರಾಜು ಪಟೇಲ್, ಸತೀಶ್ ಕೆ.ಟಿ., ಕುಮಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಜಯಮಾಲಾ, ಕಾರ್ಯದರ್ಶಿ ಶೇಖರಪ್ಪ, ಸಿಬ್ಬಂದಿಯಾದ ರಾಜೇಶ್, ಶಶಿಕುಮಾರ್, ಉಮೇಶ್ ಹಾಜರಿದ್ದು ಶುಭ ಹಾರೈಸಿದರು.

ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಬದಲಾವಣೆ: ತವರು ಜಿಲ್ಲೆ ಬಹುತೇಕ ಸಚಿವರಿಗೆ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next