Advertisement

ಮನುಷ್ಯನಾಗಿ ಹುಟ್ಟಿ ಸಾರ್ಥಕತೆ ಬದುಕು ನಡೆಸಿ

01:45 PM Sep 11, 2020 | Suhan S |

ಮಂಡ್ಯ: ಯಾವುದೇ ವ್ಯಕ್ತಿಯು ಕೆಲ ಸಂದರ್ಭಗಳಲ್ಲಿಖನ್ನತೆ, ಒತ್ತಡಕ್ಕೆ ಮತ್ತು ಹಲವು ಸಮಸ್ಯೆಗಳಿಗೆ ಒಳಗಾದಾಗ ಸೇಹಿತರ ಜೊತೆ, ಮನೋರೋಗ ತಜ್ಞರ ಬಳಿ, ಸಮಾಜದ ಹಿರಿಯರಲ್ಲಿ ಮತ್ತು ಹಿತೈಷಿಗಳ ಜೊತೆ ಮುಕ್ತವಾಗಿ ಮಾತನಾಡಿದರೆ ಹಾಗೂ ಅವಲೋಕನ ಮಾಡಿಕೊಂಡರೆ ಆತ್ಮಹತ್ಯೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಡಾ.ಎಂವಿ.ವೆಂಕಟೇಶ್‌ ಹೇಳಿದರು.

Advertisement

ಡೀಸಿ ಕಚೇರಿ ಆವರಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಕಾರ್ಯಕ್ರಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮನೋರೋಗ ವಿಭಾಗ, ಸಮುದಾಯ ವೈದ್ಯಕೀಯ ಶಾಸ್ತ್ರ ಮಿಮ್ಸ್‌, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರಕ್ಷಕ, ಅಬಕಾರಿ ಇಲಾಖೆ, ಮತ್ತು ಸೆಂಟ್‌ ಥಾಮಸ್‌ ಮಿಷನ್‌ನಿಂದ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ, ಇಡೀ ವಿಶ್ವದಲ್ಲಿ ಪ್ರತಿ ವರ್ಷ ಸುಮಾರು 8 ಲಕ್ಷ ಜನರು ತ್ಮಹತ್ಯೆಗೆ ಒಳಗಾಗುತ್ತಿರುವುದು ವಿಷಾದದಸಂಗತಿ. ಅದರಲ್ಲೂ ಬದಲಾದ ವಾತಾವರಣದಲ್ಲಿ ಯುವಕರು ಒಂಟಿತನದಿಂದ ಜೀವನ ಮಾಡುವವರು ಈ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

ಆತ್ಮಹತ್ಯೆ ಪ್ರಕರಣ ಕಡಿಮೆ: ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದವು. ಪ್ರಸ್ತುತ ಸರ್ಕಾರ, ಜಿಲ್ಲಾಡಳಿತತೆಗೆದುಕೊಂಡಿರುವ ಕ್ರಮಗಳಿಂದ ಇಂದು ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಎಲ್ಲರಲ್ಲೂ ಆತ್ಮವಿಶ್ವಾಸ ಹೆಚ್ಚಾಗಿರಲಿ, ಯಾವುದೇ ಕಾರಣಕ್ಕೂ ಆತ್ಮಹತೆ¾ ಮಾಡಿಕೊಳ್ಳಬೇಡಿ ಎಂದರು.ಬದುಕನ್ನು ಸಾರ್ಥಕಗೊಳಿಸಿ: ಆತ್ಮಹತ್ಯೆ ಹಲವಾರುಕಾರಣಗಳಿಂದ ಬರುತ್ತದೆ. ಪ್ರಮುಖವಾಗಿ ಮನುಷ್ಯಸಮಾಜ, ಪರಿಸರದೊಂದಿಗೆ ಬೆರೆತು ಸಂಪರ್ಕವನ್ನುಕಂಡುಕೊಳ್ಳಬೇಕು. ಇಲ್ಲದಿದ್ದರೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ಪುರಂದರದಾಸರು ಹೇಳುವಂತೆ”ಮನುಷ್ಯ ಜನ್ಮ ದೊಡ್ಡದು ಇದನ್ನು ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ’ ಎನ್ನುವಂತೆ, ಮನುಷ್ಯನಾಗಿ ಹುಟ್ಟುವುದೇ ಒಂದು ಸಾರ್ಥಕತೆ. ಆದ್ದರಿಂದ ನಮ್ಮ ಬದುಕನ್ನು ನಾವು ಸಾರ್ಥಕ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಜುಲ್ಫಿಕಾರ್‌ ಮಹಮದ್‌ ಉಲ್ಲಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿ ಪಿ.ವರದ ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next