Advertisement

ಪಾಕಿಸ್ಥಾನಕ್ಕೆ ಹಿನ್ನಡೆ

03:20 AM Jun 06, 2018 | Team Udayavani |

ಇಸ್ಲಾಮಾಬಾದ್‌: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಯಾಗಿರುವ ಕಿಶನ್‌ ಗಂಗಾ ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿ ತಟಸ್ಥ ತಜ್ಞರ ನೇಮಕ ಕುರಿತ ಭಾರತದ ಪ್ರಸ್ತಾಪ ಒಪ್ಪಿಕೊಳ್ಳುವಂತೆ ವಿಶ್ವಬ್ಯಾಂಕ್‌ ಪಾಕಿಸ್ಥಾನಕ್ಕೆ ಸಲಹೆ ನೀಡಿದೆ. ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ (ಐಸಿಎ)ಕ್ಕೆ ಮನವಿ ಸಲ್ಲಿಸುವ ಬದಲು ಈ ಸಲಹೆಗೆ ಒಪ್ಪಿಕೊಳ್ಳಬಹುದು ಎಂದು ಸೂಚಿಸಿದೆ. 

Advertisement

ವಿಶ್ವಬ್ಯಾಂಕ್‌ ನ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಕಳೆದ ವಾರವೇ ಈ ಬಗ್ಗೆ ಸೂಚಿಸಿದ್ದಾರೆ ಎಂದು ‘ದ ಡಾನ್‌’ ಪತ್ರಿಕೆ ವರದಿ ಮಾಡಿದೆ. ಈ ಸಲಹೆಗೆ ಒಪ್ಪಿದರೆ ಅಣೆಕಟ್ಟು ನಿರ್ಮಾಣದ ವಿರುದ್ಧ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾವಿಸಲು ಅವಕಾಶ ಇರುವುದಿಲ್ಲ. ಹೀಗಾಗಿ ಪಾಕಿಸ್ತಾನ ತಟಸ್ಥ ತಜ್ಞರ ನೇಮಕಕ್ಕೆ ವಿರೋಧ ಮಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next