Advertisement

ಪ್ರಕಾಶ್‌ ರೈಗೆ ಟೀಕಿಸುವುದೇ ಕೆಲಸ: ಸಂಸದ ಪ್ರತಾಪ್‌ ಸಿಂಹ

07:55 AM Nov 14, 2017 | |

ಮೈಸೂರು: ಕೇಂದ್ರ ಸರ್ಕಾರವನ್ನು ಟೀಕಿಸುವುದನ್ನೇ ಕೆಲಸ ಮಾಡಿಕೊಂಡಿರುವ ಪ್ರಕಾಶ್‌ ರೈ ಬಹುದೊಡ್ಡ ನಟ ಎಂದು ಸಂಸದ ಪ್ರತಾಪ್‌ ಸಿಂಹ ಲೇವಡಿ ಮಾಡಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಟ ಪ್ರಕಾಶ್‌ ರೈ ಉಗಿದು ಓಡುವ ಜಾಯಮಾನದವರು, ಅವರಂತೆ ಮಾತನಾಡಲು ನನಗೆ ಬರುವುದಿಲ್ಲ. ಜತೆಗೆ ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ ಎಂದರು.

ಗೌರಿ ಲಂಕೇಶ್‌ ಕೊಲೆ, ಉತ್ತರಪ್ರದೇಶದಲ್ಲಿ ಶಿಶುಗಳ ಮರಣ, ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸುವ ಮೂಲಕ ನಾನೊಬ್ಬ ಬಹುದೊಡ್ಡ ನಟ ಎಂಬ ಭ್ರಮೆಯಲ್ಲಿದ್ದಾರೆ ಎಂದರು. ಡಾ.ರಾಜಕುಮಾರ್‌, ಎನ್‌.ಟಿ.ರಾಮರಾವ್‌, ಅಮಿತಾಬ್‌ ಬಚ್ಚನ್‌ ಅವರ್ಯಾರೂ ಈ ರೀತಿ ಟೀಕೆ ಮಾಡಿಕೊಂಡು ತಿರುಗಲಿಲ್ಲ. ಅವರೆಲ್ಲ ವೃತ್ತಿ ಗೌರವ ಕಾಪಾಡಿಕೊಂಡಿದ್ದರು. ಇವರಿಗೆ ಟೀಕಿಸುವುದೇ ಕೆಲಸವಾಗಿದೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next