Advertisement

ಸಾಗರ: ಅಡಿಕೆ ಮರದಿಂದ ಕಾಲುಜಾರಿ ಬಿದ್ದು ಕಾರ್ಮಿಕ ಸಾವು

07:13 PM Jan 20, 2022 | Team Udayavani |

ಸಾಗರ: ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜಿಗಳೇಮನೆಯ ವಾಟೆಹಕ್ಲು ಮೀನಾಕ್ಷಮ್ಮ ಅವರ ಅಡಿಕೆ ತೋಟದಲ್ಲಿ ಅಡಿಕೆ  ಕೊನೆ ಕೊಯ್ಯುತ್ತಿದ್ದ ಸಂದರ್ಭದಲ್ಲಿ ಕಾಲುಜಾರಿ ಕೊನೆ ಗೌಡ(ಅಡಿಕೆ ಕೊಯ್ಯುವ ವೃತ್ತಿ ಮಾಡುವವರು) ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.

Advertisement

ಇಲ್ಲಿನ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಳ್ಮನೆಯ ನರಸಿಂಹ ಗೌಡ(63) ಮೃತ ವ್ಯಕ್ತಿ. ಗುರುವಾರ ಬೆಳಿಗ್ಗೆ ಮರ ಹತ್ತಿದ  ಕೆಲ ಹೊತ್ತಿನಲ್ಲಿಯೇ ಈ ಘಟನೆ ನಡೆದಿದೆ.

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next