Advertisement

ವಾರ್ಡ್‌ ಜನರ ವಿಶ್ವಾಸದೊಂದಿಗೆ ಉತ್ತಮ ಕಾರ್ಯ ಕೈಗೊಳ್ಳಿ

04:55 PM Sep 21, 2018 | Team Udayavani |

ಯಾದಗಿರಿ: ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ನೂತನ ನಗರಸಭೆ ಸದಸ್ಯರು ವಾರ್ಡ್‌ ಜನರ ವಿಶ್ವಾಸಗಳಿಸಿ ಉತ್ತಮ ಕಾರ್ಯಕೈಗೊಳ್ಳಬೇಕು ಎಂದು ಮಾಜಿ ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಹೇಳಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ನಗರಸಭೆ ಕಾಂಗ್ರೆಸ್‌ನ 11 ಸದಸ್ಯರಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮೊದಲ ಬಾರಿಗೆ ಆರಿಸಿ ಬಂದವರು, ಸಾಕಷ್ಟು ಜವಾಬ್ದಾರಿಗಳನ್ನು ಅರಿಯಬೇಕಿದೆ. ಮೊದಲು ನಿಮ್ಮ ವಾರ್ಡ್‌ಗಳಲ್ಲಿ ಸಾರ್ವಜನಿಕರಿಗೆ ಬೇಕಿರುವ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಹೇಳಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶರಣಪ್ಪಗೌಡ ಮಲ್ಹಾರ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಿತ್ತು ಎಂದರು. 

ಈ ವೇಳೆ ಕಾಂಗ್ರೆಸ್‌ ಸದಸ್ಯರಾದ ಗೌಸಿಯಾ ಬೇಗಂ, ಸವಿತಾ, ಚನ್ನಕೇಶವ ಗೌಡ, ವೆಂಕಟರೆಡ್ಡಿ, ಹುಜಮ ಫಾತೀಮಾ, ಶಾಂತಮ್ಮ, ಮಹಬೂಬ ಅಲಿ, ಗಣೇಶ ದುಪ್ಪಲ್ಲಿ, ಮನ್ಸೂರ ಅಹ್ಮದ, ಹಣಮಂತ ನಾಟೇಕರ್‌ ಹಾಗೂ ನಿರ್ಮಲಾ ಅವರನ್ನು ಸನ್ಮಾನಿಸಲಾಯಿತು.

 ಈ ಸಂದರ್ಭದಲ್ಲಿ ಶ್ರೀನಿವಾಸರೆಡ್ಡಿ ಕಂದಕೂರ, ಚನ್ನಾರೆಡ್ಡಿ ತುನ್ನೂರ, ಮರಿಗೌಡ ಪಾಟೀಲ ಹುಲಕಲ್‌, ಮಂಜುಳಾ ಗೂಳಿ, ಸುರೇಶ ಜೈನ್‌, ಮರೆಪ್ಪ ಬಿಳಾರ, ರವಿ ಮಾಲಿಪಾಟೀಲ, ಡಾ| ಸಗರಿ, ಡಾ| ರಫಿಕ್‌, ಶಶಿಧರರಡ್ಡಿ ಹೊಸ್ಸಳ್ಳಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next