Advertisement

6 ತಿಂಗಳುಗಳಿಂದ ನಿಂತು ಹೋಗಿರುವ ಕಾಮಗಾರಿ

12:50 AM Jun 19, 2019 | Team Udayavani |

ಉಡುಪಿ: ಕೊಡಿಬೆಟ್ಟು ಗ್ರಾ.ಪಂ. ವ್ಯಾಪ್ತಿಯ ಅಂಜಾರು ಪೊಲೀಸ್‌ ವಸತಿಗೃಹ ಹಿಂಭಾಗದ ಸುಮಾರು 100 ಮೀಟರ್‌ ಉದ್ದದ ರಸ್ತೆ ಅಭಿವೃದ್ಧಿಗಾಗಿ ರಸ್ತೆಯ ಕೆಲವು ಕಡೆ ಜಲ್ಲಿ ಕಲ್ಲು, ಕಲ್ಲಿನ ಪುಡಿ ಹಾಕಿ 6 ತಿಂಗಳಾದರೂ ಕಾಮಗಾರಿ ಮುಂದುವರೆದಿಲ್ಲ. ಇದರಿಂದಾಗಿ ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

‘ರಸ್ತೆಗೆ 2.5 ಲ.ರೂ. ಅನುದಾನ ಮಂಜೂರಾಗಿರುವ ಬಗ್ಗೆ ಮಾಹಿತಿ ಇದೆ. ಜಲ್ಲಿಕಲ್ಲುಗಳನ್ನು ಹಾಕಿ ಹೋದ ಗುತ್ತಿಗೆದಾರರು ಅನಂತರ ಇತ್ತ ಕಡೆ ಬಂದಿಲ್ಲ. ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ದ್ವಿಚಕ್ರ ವಾಹನ ಸವಾರರು ಇದರ ಮೇಲೆ ಹೋಗುವಂತೆಯೇ ಇಲ್ಲ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next