Advertisement

ಬಯಲಾಟ ಕಲೆ ಉಳಿಸಿ-ಬೆಳೆಸಲು ಶ್ರಮಿಸಿ

03:28 PM Jan 04, 2021 | Team Udayavani |

ಗದಗ: ಭಾರತೀಯ ಪರಂಪರೆ, ಸಂಸ್ಕೃತಿ ಮತ್ತು ನೈತಿಕತೆ, ಪೌರಾಣಿಕ ಕಥೆಗಳನ್ನು ಆಧರಿಸಿದಹಾಗೂ ಉತ್ತರ ಕರ್ನಾಟಕದ ಜನಪದ ಕಲೆಮೂಡಲಪಾಯ ಬಯಲಾಟ ಉಳಿಯಬೇಕು,ಬೆಳೆಯಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಪ್ರೊ|ಎಸ್‌.ವಿ.ಸಂಕನೂರ ಹೇಳಿದರು.

Advertisement

ಬೆಟಗೇರಿಯ ಕಾಳಿಕಾದೇವಿ ದೇವಾಲಯದ ಸಭಾಭವನದಲ್ಲಿ ಸುತಾರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಸಹಯೋಗದಲ್ಲಿ ನಡೆದ ಮೂಡಲಪಾಯಬಯಲಾಟಗಳ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಪ್ರತಿ ಗ್ರಾಮದಲ್ಲೂ ಜಾತ್ರೆ,ಉತ್ಸವ ಸೇರಿದಂತೆ ವರ್ಷಕ್ಕೆ ಕನಿಷ್ಟ ಎರಡು-ಮೂರು ಬಾರಿ ಜಾನಪದ ಕಲೆಗಳ ಪ್ರದರ್ಶನ ನಡೆಯುತ್ತಿತ್ತು.ಗ್ರಾಮೀಣ ಭಾಗದ ಕಲಾವಿದರಿಗೆ ಪ್ರೋತ್ಸಾಹವೂದೊರೆಯುತ್ತಿತ್ತು. ಆದರೆ ಇತ್ತೀಚೆಗೆ ಸಿನಿಮಾಮತ್ತು ಟಿ.ವಿ ಹಾವಳಿಯಿಂದ ಜೀವಂತ ಕಲೆಯಾದನಾಟಕ ಮತ್ತು ಬಯಲಾಟಗಳು ಮರೆಯಾಗುತ್ತಿವೆ. ನಮ್ಮ ಜೀವನ ಶೈಲಿ, ಪರಂಪರೆಯನ್ನು ಬಿಂಬಿಸುವಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೂಪರಿಚಯಿಸುವ ಕೆಲಸವಾಗಬೇಕು. ಯುವ ಜನರಿಗೆಈ ಕಲೆಗಳ ಕುರಿತು ತರಬೇತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ಕೆಲವು ತಿಂಗಳ ಹಿಂದೆ ಬಯಲಾಟ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ಹೆಚ್ಚಿಸಿದೆ. ಬಯಲಾಟಕಲಾವಿದರ ಅನುಕೂಲಕ್ಕಾಗಿ ಮುಂಬರುವಬಜೆಟ್‌ನಲ್ಲಿ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸುವಂತೆಸರಕಾರದ ಗಮನ ಸೆಳೆಯುವುದಾಗಿ ಭರವಸೆ ನೀಡಿದರು. ನರಗುಂದದ ಭೈರನಹಟ್ಟಿ ದೊರೆಸ್ವಾಮಿವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸುತಾರ ಸಾಂಸ್ಕೃತಿಕ ಕಲಾ ಸಂಘ ಕಳೆದ ಹಲವಾರು ವರ್ಷಗಳಿಂದ ಹಿರಿಯ ಕಲಾವಿದರನ್ನು ಸನ್ಮಾನಿಸಿ, ಪ್ರೋತ್ಸಾಹಿಸುತ್ತಿದೆ. ಕಲಾವಿದರನ್ನು ಸಂಘಟಿಸಿ ಅವರ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸುತಾರ ಸಾಂಸ್ಕೃತಿಕ ಕಲಾಸಂಘದ ಪರವಾಗಿ ಮೂಡಲಪಾಯ ಬಯಲಾಟದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಗಂಗಮ್ಮ ಕಾಡದೇವರ ಮಠ ಅವರಿಗೆ ಜಾನಪದ ಕೋಗಿಲೆ ಸಿರಿ, ಭರಮಪ್ಪ ಮಳ್ಳೂರ ರವರಿಗೆ ಜಾನಪದ ಸಿರಿ, ನಿಂಗಪ್ಪ ಕೊಂಗವಾಡ ಬಯಲಾಟ ಸಿರಿಭರಮಪ್ಪ ಕಿತ್ತೂರ ಜಾನಪದ ಸಿರಿ ಪ್ರಶಸ್ತಿ ನೀಡಿ,  ಗೌರವಿಸಲಾಯಿತು. ವೇದಿಕೆ ಮೇಲೆ ಸುತಾರ ಸಾಂಸ್ಕೃತಿಕ ಕಲಾಸಂಘದ ಅಧ್ಯಕ್ಷ ಅಶೋಕ ಸುತಾರ, ಸಂಘದ ಪದಾಧಿ ಕಾರಿಗಳಾದ ಶಂಕ್ರಪ್ಪ ಬಡಿಗೇರ, ಮಲ್ಲಿಕಾರ್ಜುನ ನವಲಗುಂದ, ಗೂಳಪ್ಪ ಗೋಡಿ, ಸುಭಾಸ ಮಾಳಗಿ, ಶ್ರೀನಿವಾಸ ಹಡಪದ, ಸದಾಶಿವಪ್ಪ ಕರಭಿಷ್ಠಿ, ಸುರೇಶ ಬಡಿಗೇರ, ಖಾಜಾಸಾಬ ನಾರಾಯಣಕೇರಿ, ಮಲ್ಲೇಶಗೌಡ ತಿಮ್ಮನಗೌಡ್ರ,ಬಾಳಪ್ಪ ಮನಗೂಳಿ, ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next