Advertisement

ಮಹಿಳಾ ಕಾರಾಗೃಹ ಶಿವಮೊಗ್ಗಕ್ಕೆ ಸ್ಥಳಾಂತರ?

03:53 PM Feb 08, 2018 | |

ತುಮಕೂರು : ರಾಜ್ಯದಲ್ಲಿಯೇ ಮೊದಲ ಮಹಿಳಾ ಕಾರಾಗೃಹವಾಗಿರುವ ತುಮಕೂರು ಮಹಿಳಾ ಕೇಂದ್ರ ಕಾರಾಗೃಹವನ್ನು ತುಮಕೂರಿನಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಉನ್ನತ ಅಧಿಕಾರಿಗಳ ಮಟ್ಟದಲ್ಲಿ ಚಿಂತನೆಗಳು ನಡೆದಿದೆ ಎಂದು ತಿಳಿದು ಬಂದಿದೆ.

Advertisement

2013ರಲ್ಲಿ ಆರಂಭ: ರಾಜಧಾನಿ ಬೆಂಗಳೂರಿಗೆ ಹತ್ತಿರವಾಗಿರುವ ತುಮಕೂರಿನಲ್ಲಿ ಕೇಂದ್ರ ಕಾರಾಗೃಹವನ್ನು ಪ್ರಾರಂಭ ಮಾಡಬೇಕೆಂದು ಅಂದಿನ ಸರ್ಕಾರ ತನ್ನ ಬಜೆಟ್‌ನಲ್ಲಿ ಘೋಷಣೆ ಮಾಡಿ ಜಿಲ್ಲೆಗೆ ಕೊಡುಗೆಯಾಗಿ ಮಹಿಳಾ ಕಾರಾಗೃಹವನ್ನು ನೀಡಿತ್ತು. 

ಈ ಕಾರಾಗೃಹ ನಗರದಲ್ಲಿ 2013 ಏ.28 ರಂದು ರಾಜ್ಯದ ಮೊದಲ ಮಹಿಳಾ ಕೇಂದ್ರ ಕಾರಾಗೃಹವಾಗಿ ಪ್ರಾರಂಭವಾಗಿತ್ತು. ಆರಂಭದಲ್ಲಿ 74 ಮಹಿಳಾ ಶಿಕ್ಷಾ ಬಂಧಿಗಳು ಈ ಬಂಧೀಖಾನೆಯಲ್ಲಿ ಇದ್ದರು. ಈಗ 80ಕ್ಕೂ ಹೆಚ್ಚು ಮಹಿಳಾ ಖೈದಿಗಳು ಇಲ್ಲಿದ್ದಾರೆ ವಿವಿಧ ಕಾರಣಗಳಿಂದ ಶಿಕ್ಷೆಗೆ ಒಳಪಟ್ಟು ಇಲ್ಲಿ ಶಿಕ್ಷೆ ಪಡೆಯುತ್ತಿದ್ದಾರೆ.

ತುಮಕೂರಿನಲ್ಲಿದ್ದ ಕಾರಾಗೃಹವನ್ನು ಊರುಕೆರೆ ಭೋವಿ ಪಾಳ್ಯಕ್ಕೆ ಸ್ಥಳಾಂತರ ಮಾಡಿದ ಮೇಳೆ ತುಮಕೂರಿಗೆ ಮಹಿಳಾ ಕಾರಾಗೃಹ ಮಂಜೂರಾಗಿತ್ತು ಈ ವೇಳೆಯಲ್ಲಿ ಮಹಿಳಾ ಕಾರಾಗೃಹವನ್ನು ಪ್ರಾಂಭಿಸಲು ಸೂಕ್ತವಾದ ಕಟ್ಟಡ ಇಲ್ಲದ ಕಾರಣದಿಂದ ಹಳೆಯ ಕಾರಾಗೃಹದಲ್ಲಿಯೇ ಮಹಿಳಾ ಕಾರಾಗೃಹವನ್ನು ಆರಂಭ ಮಾಡಿದರು. ಈ ಕಾರಾಗೃಹದಲ್ಲಿ ಬಳ್ಳಾರಿ, ಮೈಸೂರು, ರಾಮನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ವಿಚಾರಣಾಧೀನ ಮಹಿಳಾ ಕೈದಿಗಳು ಇದ್ದಾರೆ.
 
ಕೈದಿಗಳಿಗೆ ಉದ್ಯೋಗ ತರಬೇತಿ: ತುಮಕೂರು ನಗರದ ಹೃದಯ ಭಾಗದಲ್ಲಿ ಇರುವ ಈ ಮಹಿಳಾ ಕಾರಾಗೃಹ ನವೀಕರಣದ ಕಾಮಗಾರಿಗಳು ಈಗ ನಡೆಯುತ್ತಿವೆ ಇದರ ಜೊತೆಗೆ ಈ ಕಾರಾಗೃಹದಲ್ಲಿ ಇರುವ ಮಹಿಳಾ ಕೈದಿಗಳು ಜೈಲಿನಿಂದ ಹೊರ ಬಂದ ಮೇಲೆ ಸ್ವಾಭಿಮಾನಿ ಬದುಕು ನಡೆಸಲು ಇಲ್ಲಿ ಹಲವು ತರಬೇತಿಗಳನ್ನು ನೀಡಲಾಗುತ್ತಿದೆ ಇಂತಹ ಮಹಿಳಾ ಕಾರಾಗೃಹವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಉನ್ನತ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ತುಮಕೂರಿನಲ್ಲಿರುವ ಈ ಮಹಿಳಾ ಕಾರಾಗೃಹಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಜಿಲ್ಲಾಧಿಕಾರಿಗಳು ಕೆ.ಪಿ. ಮೋಹನ್‌ ರಾಜ್‌ ಅವರು ಸೂಕ್ತ ಜಾಗವನ್ನು ನೀಡಲು ಪರಿಶೀಲನೆ ಮಾಡುತ್ತಿದ್ದಾರೆ ಕೈದಿಗಳ ಸಂಬಂಧಿಕರು ಬಂದು ಹೋಗಲು ಇದು ಸೂಕ್ತವಾದ ನಗರ ಇದಾಗಿದೆ ಮತ್ತು ಕೈದಿಗಳಿಗೆ ಈ ಪರಿಸರ ಹೊಂದಿಕೊಂಡಿದೆ, ತುಮಕೂರಿಗೆ ಸರ್ಕಾರದಿಂದ ಮಂಜೂರಾಗಿ ಕಾರ್ಯಾರಂಭ ಮಾಡುತ್ತಿರುವ ಈ ಕಾರಾಗೃಹವನ್ನು ಬೇರೆ ಭಾಗಕ್ಕೆ ಸ್ಥಳಾಂತರಿಸದಂತೆ ಸಂಬಂಧಿಸಿದ ಜನ ಪ್ರತಿನಿಧಿಗಳು ತುಮಕೂರಿನ ಮಹಿಳಾ ಕಾರಾಗೃಹವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಬಿಡುವುದಿಲ್ಲ. ಮಹಿಳಾ ಕಾರಾಗೃಹಕ್ಕೆ ಅಗತ್ಯವಾಗಿರುವ
ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈ ಮಹಿಳಾ ಕೇಂದ್ರ ಕಾರಾಗೃಹ ಸ್ಥಳಾಂತರದ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಅಂತಹ ಸಂದರ್ಭ ಬಂದರೆ ಗೃಹ ಸಚಿವರೊಂದಿಗೂ ಮಾತನಾಡಿ ಇದು ಸ್ಥಳಾಂತರವಾಗದಂತೆ ಎಚ್ಚರವಹಿಸುತ್ತೇನೆ.
ಡಾ. ಎಸ್‌. ರಫಿಕ್‌ ಅಹಮದ್‌, ಶಾಸಕ 

Advertisement
Advertisement

Udayavani is now on Telegram. Click here to join our channel and stay updated with the latest news.

Next