Advertisement

ಹೊರಾಂಗಣದಲ್ಲಿ ಮಹಿಳಾ ಕಾಂಗ್ರೆಸ್‌ ಸಭೆ

03:48 PM Apr 13, 2017 | Team Udayavani |

ಉಡುಪಿ: ಇಂದಿರಾ ಗಾಂಧಿಯವರಂತಹ ಧೀಮಂತ ನಾಯಕತ್ವ ಮಗದೊಮ್ಮೆ ದೇಶಕ್ಕೆ ಅನಿವಾರ್ಯ. ಆ ನಿಟ್ಟಿನಲ್ಲಿ ಮಹಿಳೆಯರು ಕಾರ್ಯಪ್ರವೃತ್ತರಾಗಿ ಮಹಿಳಾ ಕಾಂಗ್ರೆಸ್‌ ಸಂಘಟನೆಯನ್ನು ಬಲಪಡಿಸಿ ಕಾಂಗ್ರೆಸ್‌ ಪಕ್ಷವನ್ನು ಸದೃಢಗೊಳಿಸಬೇಕಾಗಿ ಕೆಪಿಸಿಸಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ತಿಳಿಸಿದರು. 

Advertisement

ಅಜ್ಜರಕಾಡಿನ ಭುಜಂಗ ಪಾರ್ಕ್‌ ಹೊರಾಂಗಣದಲ್ಲಿ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಇದು ಮೊದಲ ಬಾರಿ ಹೊರಾಂಗಣದಲ್ಲಿ ನಡೆದ ಸಭೆಯಾಗಿದೆ. 

ಇಂದಿರಾ ಗಾಂಧಿಯವರ ಜನ್ಮಶತಾಬ್ದಿ ಬಗ್ಗೆ ಬ್ಲಾಕ್‌ವಾರು ಹಮ್ಮಿಕೊಂಡಂತಹ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಯಿತು. ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಸರಳಾ ಕಾಂಚನ್‌, ಸರಸು ಡಿ. ಬಂಗೇರ, ಜಯಶ್ರೀ ಕೃಷ್ಣರಾಜ್‌, ಸುಜಾತಾ ಆಚಾರ್ಯ, ಚಂದ್ರಿಕಾ ಶೆಟ್ಟಿ, ರೋಶನಿ ಒಲಿವರ್‌, ಮೇರಿ ಡಿ’ಸೋಜ, ಆಶಾ, ರಮಾದೇವಿ, ಸುಲೋಚನಾ ದಾಮೋದರ್‌, ಸುಂದರಿ, ಅಮ್ಮಣ್ಣಿ, ಐರಿನ್‌, ಹೆಲೆನ್‌, ಲೆನ್ನಿ, ಪುಷ್ಪಾ ಮೊದಲಾದವರು ಉಪಸ್ಥಿತರಿದ್ದರು.  ವೆರೋನಿಕಾ ಕರ್ನೇಲಿಯೋ ಅಧ್ಯಕ್ಷತೆಯನ್ನು ವಹಿಸಿ ಡಾ| ಸುನಿತಾ ಶೆಟ್ಟಿ ವಂದಿಸಿದರು. 
 

Advertisement

Udayavani is now on Telegram. Click here to join our channel and stay updated with the latest news.

Next