Advertisement
ಬ್ರಹ್ಮಕಲಶೋತ್ಸವ ಹೇಗೆ ನಡೆಸಬೇಕೆಂದು ತೀರ್ಮಾನಿಸುವ ಹಕ್ಕು ತಂತ್ರಿಗಳದ್ದು. ಇದರ ವಿವರಣೆಯನ್ನು ಸಂವಿಧಾನ ಪುಸ್ತಕದಲ್ಲಿ ದಾಖಲಾಗಿಲ್ಲ. ಇವೆಲ್ಲವೂ ಅಲ್ಲಿನ ಪ್ರತಿಷ್ಠೆ, ಪ್ರಕೃತಿದತ್ತ ವ್ಯತ್ಯಾಸ ಹೊಂದಿಕೊಂಡು ಬದಲಾವಣೆ ಮಾಡಲೇಬೇಕು. ಹೀಗೆ ವ್ಯತ್ಯಸ್ತ ಜಾಗ, ವ್ಯತ್ಯಸ್ತ ಪ್ರತಿಷ್ಠೆ, ಇದನ್ನು ಅನುಸರಿಸಿ ನಮ್ಮೆಲ್ಲ ಆಚಾರ ವಿಚಾರ ವಿಭಿನ್ನವಾಗಿದೆ. ಇದನ್ನು ನಮ್ಮ ನ್ಯಾಯಾಂಗ ತೀರ್ಮಾನಿಸಬೇಕೆನ್ನುವುದು ಸರ್ವಥಾ ಸರಿಯಲ್ಲ. ಭಕ್ತರು ಸಲ್ಲಿಸುವ, ಸಮರ್ಪಿಸುವ ಭಕ್ತಿಗೆ ದೇವರು ಒಲಿಯುತ್ತಾನೆ. ಅಲ್ಲದೆ ತಂತ್ರ ಮಂತ್ರದ ಆಧಾರದಲ್ಲಿ ಪ್ರಹ್ಲಾದನಿಗೆ ನರಹರಿ ಒಲಿದುದಲ್ಲ. ಸಮೂಹ ರಕ್ಷಣೆಗಾಗಿ ಸ್ತ್ರೀಶಕ್ತಿ ಎದ್ದು ನಿಲ್ಲಲಿ ಎಂದು ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಶಶಿಕಲಾ ಟೀಚರ್ ಪಟ್ಟಾಂಬಿ ಅವರು ಹೇಳಿದರು.
ದೇವಸ್ಥಾನ ಸುಸ್ಥಿತಿಯಲ್ಲಿರಬೇಕು
ಶಿವ ಎಂದರೆ ಮಂಗಳ ಎಂದರ್ಥ. ಊರು ಶೋಭಿಸಬೇಕಾದರೆ, ಸುಭಿಕ್ಷೆಯಿಂದಿರಬೇಕಾದರೆ ಆ ಊರಿನಲ್ಲಿ ದೇವಾಲಯ ಇರಲೇ ಬೇಕು. ಊರಿಗೆ ದೇಗುಲವೇ ಶೃಂಗಾರ. ಧರ್ಮದ ಉದ್ಧಾರದ ಅಡಿಪಾಯ ದೇಗುಲ. ಆತೊ¾àನ್ನತಿ ಉಂಟು ಮಾಡಲು ಮತ್ತು ಸಮಾಜ ಗಟ್ಟಿಯಾಗಿರಲು ದೇವಸ್ಥಾನ ಸುಸ್ಥಿತಿಯಲ್ಲಿರಬೇಕೆಂದು ಒಡಿಯೂರು ಶ್ರೀ ಕ್ಷೇತ್ರದ ಸಾಧ್ವಿ ಶ್ರೀ ಮಾತಾನಂದಮಯಿ ಅವರು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಮಾತೃ ಸಮಿತಿ ಅಧ್ಯಕ್ಷೆ ಸವಿತಾ ಟೀಚರ್ ಅಧ್ಯಕ್ಷತೆ ವಹಿಸಿದರು. ಮಂಗಳೂರು ಗ್ರಾಮಾಂತರ ಮಾತೃ ಮಂಡಳಿ ಅಧ್ಯಕ್ಷೆ ಮೀರಾ ಆಳ್ವ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷೆ ಪ್ರೇಮಾ ಎಲ್ಲೋಜಿ ರಾವ್ ಕೋಟೆಕಣಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಯೋಜನಾಧಿಕಾರಿ ಚೇತನಾ ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
Related Articles
Advertisement
ಆಚಾರ್ಯ ಸಂಗಮ ಮಾ. 15ರಂದು ಬೆಳಗ್ಗೆ ಗಣಪತಿ ಹೋಮ, ಪ್ರೋಕ್ತ ಹೋಮ, ಪ್ರಾಯಶಿತ್ತ ಹೋಮ, ಶಾಂತಿ ಹೋಮ, ತತ್ವ ಹೋಮ, ತತ್ವಕಲಶ ಪೂಜೆ, ಮಂಡಲ ಪೂಜೆ, ಭಜನೆ, ಸಂಜೆ ಆಚಾರ್ಯ ಸಂಗಮ, ಕುಂಭೇಶ ಕರ್ಕರಿ ಕಲಶ ಪೂಜೆ, ಅಧಿವಾಸ ಹೋಮ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ, ಧ್ವಜವಾಹನ ಅಧಿವಾಸ, ರಾತ್ರಿ “ದೇಶ ಕರೆದಾಗ’ ಕನ್ನಡ ನಾಟಕ ನಡೆಯಿತು. ಇಂದು ಬ್ರಹ್ಮಕಲಶ
ಬೆಳಗ್ಗೆ ಕವಾಟೋದ್ಘಾಟನೆ, ನಿರ್ಮಾಲ್ಯ ದರ್ಶನ, ಗಣಪತಿ ಹೋಮ, ತೈಲಾಭ್ಯಂಜನ, ಉಷಃಪೂಜೆ, ಧ್ವಜಪ್ರತಿಷ್ಠೆ, ಹೋಮ ಕಲಶಾ ಭಿಷೇಕಗಳು, ಶತರುದ್ರ ಪಾರಾಯಣ, ಪರಿಕಲಶಾಭಿಷೇಕ, ಮಾ. 16ರಂದು ಮಧ್ಯಾಹ್ನ 12.30ಕ್ಕೆ ಬ್ರಹ್ಮ ಕಲಶಾಭಿಷೇಕ, ರಾತ್ರಿ ಪೂಜೆ, ಶ್ರೀ ಭೂತಬಲಿ, ನೃತ್ಯ ಬಲಿ, ರಾಜಾಂಗಣ ಪ್ರಾಸಾದ, ಸಂಜೆ 5.30ರಿಂದ ಸಮಾರೋಪ ಸಮಾರಂಭ ನಡೆಯುವುದು.