Advertisement

2021ರಲ್ಲಿ ತಾಯಿ ಮನೆಗೆಂದು ಹೊರಟ ಗ್ರಹಿಣಿ ನಾಪತ್ತೆ : ಪತ್ತೆಗೆ ಮನವಿ

08:08 PM Mar 16, 2022 | Team Udayavani |

ಹುಣಸೂರು : ಹುಣಸೂರು ನಗರದ ತಂದೆ ಮನೆಗೆ ಬಂದಿದ್ದ ಗೃಹಿಣಿ ನಾಪತ್ತೆಯಾಗಿದ್ದಾರೆಂದು ಹುಣಸೂರು ನಗರ ಠಾಣೆಯಲ್ಲಿ ಆಕೆಯ ಸಹೋದರಿ ಸೋನಿಯಾ ದೂರು ನೀಡಿದ್ದಾರೆ.

Advertisement

ನಗರದ ಸರಸ್ವತಿ ಪುರಂ ನಿವಾಸಿ ರಾಜೇಶ ಅವರ ಪುತ್ರಿ ಸಿಂಧೂರ ಅವರನ್ನು ಕೇರಳದ ಕೋಝಿಕೋಡ್ ಜಿಲ್ಲೆಯ ನಂದಾಪುರ ಗ್ರಾಮದ ಹಂಬಾಕುಲ ನಗರದ ಪಿ.ಪಿ.ಸಜೇಶ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

ಪತಿ ಮನೆಯಿಂದ ತಂದೆ ಮನೆಗೆ ಬಂದಿದ್ದ ಈಕೆ 2021ರ ನವಂಬರ್ 14 ರ ಬಳಿಕ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಈ ವೇಳೆ ತಾಯಿ ಮನೆಯವರು ಆಕೆಯ ಪತಿ ಮನೆಗೆ ಹೋಗಿ ನೋಡಿದ ವೇಳೆ ತಂದೆ ಮನೆಗೆ ಹೋಗಿದ್ದವಳು ವಾಪಸ್ ಮರಳಿಲ್ಲವೆಂದು ಪತಿ ತಿಳಿಸಿದ್ದಾರೆ.

ತನ್ನ ಅಕ್ಕ ಸಿಂಧು ಕಾಣೆಯಾಗಿದ್ದಾಳೆಂದು ಆಕೆಯ ಸಹೋದರಿ ಸೋನಿಯಾ ಅವರು ಠಾಣೆಗೆ ದೂರು ನೀಡಿದ್ದಾರೆ.

ಸಿಂಧೂವಿನ ಮಾಹಿತಿ ಇದ್ದವರು 08222-253133 ಗೆ ಮಾಹಿತಿ ನೀಡುವಂತೆ ಡಿವೈಎಸ್‌ಪಿ ರವಿಪ್ರಸಾದ್ ಮನವಿ ಮಾಡಿದ್ದಾರೆ.

Advertisement

ಇದನ್ನೂ ಓದಿ : ವಿಟ್ಲ: ಅಡಿಕೆ ಕಳ್ಳತನ ಪ್ರಕರಣ; ನಾಲ್ವರು ಅಪ್ರಾಪ್ತ ಬಾಲಕರು ಪೊಲೀಸರ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next