Advertisement

Bangalore: ಗರ್ಭಿಣಿಗೆ ಮಹಿಳೆಯರು ಒದ್ದು ಹೊಟ್ಟೆಯಲ್ಲೇ ಮಗು ಸಾವು

02:27 PM Feb 20, 2024 | Team Udayavani |

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ಇಬ್ಬರು ಮಹಿಳೆಯರು ನನ್ನ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದು, ಅದರಿಂದಾಗಿ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗೋವಿಂದರಾಜ ನಗರ ಠಾಣೆಗೆ ದೂರು ನೀಡಿದ್ದಾರೆ.

Advertisement

ಈ ಸಂಬಂಧ ಸುಬ್ಬಣ್ಣ ಗಾರ್ಡನ್‌ ನಿವಾಸಿ 32 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಂಡ್ಯ ಬಿರಿಯಾನಿ ಸೆಂಟರ್‌ ಮಾಲೀಕರಾದ ಪದ್ಮಮ್ಮ ಹಾಗೂ ಕಾವ್ಯಾ ಎಂಬವರ ವಿರುದ್ಧ ಎಫ್ ಐಆರ್‌ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ದೂರುದಾರ ಮಹಿಳೆಯ ಪತಿ ಶ್ರೀಸಾಯಿ ಬೈಕ್‌ ಪಾಯಿಂಟ್‌ ಎಂಬ ಗ್ಯಾರೇಜ್‌ ನಡೆಸುತ್ತಿದ್ದು, ಪಕ್ಕದಲ್ಲೇ ಆರೋಪಿಗಳು ಮಂಡ್ಯ ಬಿರಿಯಾನಿ ಸೆಂಟರ್‌ ಹೋಟೆಲ್‌ ನಡೆಸುತ್ತಿದ್ದಾರೆ. 2024ರ ಫೆ.11ರಂದು ಬೆಳಗ್ಗೆ ಕ್ಷುಲ್ಲಕ ವಿಚಾರಕ್ಕೆ ದೂರುದಾರ ಮಹಿಳೆ ಮತ್ತು ಆಕೆಯ ಪತಿ ಜತೆ ಜಗಳವಾಗಿದೆ. ಬಳಿಕ ಘಟನೆ ಠಾಣೆ ಮೇಟ್ಟಿಲೇರಿತ್ತು. ಪೊಲೀಸರೇ ಇಬ್ಬರಿಗೂ ಸಮಾಧಾನ ಮಾಡಿ ಕಳುಹಿಸಿದ್ದರು. ಅದೇ ದಿನ ಬೆಳಗ್ಗೆ 11 ಗಂಟೆಗೆ ಪದ್ಮಮ್ಮ ಮತ್ತು ಕಾವ್ಯಾ ದೂರುದಾರ ಮಹಿಳೆ ಮನೆಗೆ ಹೋಗುವಾಗ ಅಡ್ಡಗಟ್ಟಿ ಮತ್ತೆ ಜಗಳ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಆಕೆ ಹೊಟ್ಟೆಗೆ ಒದ್ದಿದ್ದರು. ಕುಸಿದು ಬಿದ್ದಿದ್ದ ಮಹಿಳೆಯನ್ನು ಸಂಬಂಧಿಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಫೆ. 14ರಂದು ಹೊಟ್ಟೆ ನೋವು ಹೆಚ್ಚಾಗಿತ್ತು. ಹೆರಿಗೆ ಮಾಡಿದ್ದ ವೈದ್ಯರು, ಹೊಟ್ಟೆ ಯಲ್ಲಿಯೇ ಮಗು ಮೃತಪಟ್ಟಿದ್ದಾಗಿ ದೃಢ ಪಡಿಸಿದ್ದಾರೆ. ಹೀಗಾಗಿ ಪದ್ಮಮ್ಮ , ಕಾವ್ಯಾ ತನ್ನ ಹೊಟ್ಟೆಗೆ ಒದಿದ್ದರಿಂದಲೇ ಮಗು ಮೃತಪಟ್ಟಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖೀಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next