Advertisement

Belagavi: ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ; ಹಲವರ ವಿರುದ್ದ ದೂರು

11:43 PM Oct 14, 2023 | Team Udayavani |

ಬೆಳಗಾವಿ: ಹನಿಟ್ರ್ಯಾಪ್ ಆರೋಪದಡಿ ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆ ಎಳೆ ತಂದು ಹಲ್ಲೆ ಮಾಡಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಘಟನೆ ಗೋಕಾಕ ತಾಲೂಕಿನ ಘಟಪ್ರಭಾದ ಮಲ್ಲಾಪುರ ಪಿ.ಜಿ.ಯಲ್ಲಿ ನಡೆ ದಿದೆ. ಈ ಕುರಿತ ವೀಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Advertisement

ತರ ಕಾರಿ ವ್ಯಾಪಾ ರಿ ಯಾದ ಶ್ರೀದೇವಿ ಗೊಡಚಿ ಎಂಬವರ ಮನೆಗೆ ಸ್ಥಳೀಯ ಮಹಿಳೆಯರು ಮತ್ತು ಕೆಲವು ಪುರುಷರು ಶುಕ್ರವಾರ ರಾತ್ರಿ ಹೋಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಮೆರವಣಿಗೆ ಮೂಲಕ ಮೃತ್ಯುಂಜಯ ಸರ್ಕಲ್‌ಗೆ ಕರೆತಂದು ಚಪ್ಪಲಿ ಹಾಕಿ ಥಳಿಸಿದ್ದಾರೆ. ಬಳಿಕ ಘಟಪ್ರಭಾ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮಹಿಳೆಯ ಪತಿ ಲಕ್ಷ್ಮಣ ಆರೋಪಿಸಿದ್ದಾರೆ.

ಈಕೆ ಹನಿಟ್ರ್ಯಾಪ್ ಮಾಡುತ್ತಿದ್ದು, ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಘಟಪ್ರಭಾ ಪೊಲೀಸರು ಕೂಡಲೇ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ  ಘಟಪ್ರಭಾದ ಅರ್ಜುನ ಗಂಡವ್ವಗೋಳ, ಮಾರುತಿ ದೊಡ್ಡಮನಿ, ಉದಯ ಗಂಡವ್ವಗೋಳ, ಕೃಷ್ಣಾ ಗಂಡವ್ವಗೋಳ, ಸುಧೀರ ರಾಜು ಚಿಂಚಲಿ, ಲಕ್ಷ್ಮೀ ಹರಿಜನ, ಸಾವಕ್ಕಾ ಹರಿಜನ, ಕಮಲವ್ವ ಭಜಂತ್ರಿ, ಶೋಭಾ ಹರಿಜನ, ಶಾಲವ್ವ ಲಕ್ಷ್ಮಣ ದೊಡ್ಡಮನಿ, ಗೀತಾ ಲಕ್ಷ್ಮಣ ದೊಡ್ಡಮನಿ, ಶಿಂದಿಕುರಬೇಟ ಗ್ರಾಮದ ಮಾರ್ಕಂಡೇಯ ಮಹಿಮಗೋಳ ಹಾಗೂ ಇನ್ನೂ 10 ಜನರ ವಿರುದ್ಧ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next