Advertisement

Belagavi; ಮಹಿಳೆ ವಿವಸ್ತ್ರ ಪ್ರಕರಣ: ಬೆಳಗಾವಿಗೆ ಬಂದಿಳಿದ ಕೇಂದ್ರ ಬಿಜೆಪಿ ನಿಯೋಗ

11:16 AM Dec 16, 2023 | Team Udayavani |

ಬೆಳಗಾವಿ: ಹೊಸ ವಂಟಮೂರಿ ಗ್ರಾಮದ ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಬಿಜೆಪಿಯ ಸತ್ಯಶೋಧನಾ ಸಮಿತಿ ಕೈವಾರ ಬೆಳಗ್ಗೆ ಬೆಳಗಾವಿಗೆ ಆಗಮಿಸಿದೆ.

Advertisement

ತಂಡದ‌ ನಿಯೋಗದಲ್ಲಿರುವ ಸಂಸದರಾದ ಅಫ್ರಜಿತಾ ಸಾರಂಗಿ, ಸುನಿತಾ ದುಗ್ಗಲ್,  ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರ ಅವರ ನಿಯೋಗ ಆಗಮಿಸಿದೆ.

ಬೆಳಗ್ಗೆ 10:30ಕ್ಕೆ ಸಂತ್ರಸ್ತ ಮಹಿಳೆಯನ್ನು‌ ಜಿಲ್ಲಾಸ್ಪತ್ರೆಯಲ್ಲಿ ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ನಂತರ ಸಂತ್ರಸ್ತೆಯ ಮನೆಗೆ ತೆರಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next