Advertisement
ಶಬರಿಮಲೆಗೆ ಈಚೆಗೆ ಋತುಮತಿ ವಯಸ್ಸಿನ ಮೂವರು ಮಹಿಳೆಯರು ಪ್ರವೇಶಿಸಿದ ಬಳಿಕ ಪುರುಷರಿಗೆ ಮಾತ್ರ ಪ್ರವೇಶವಿರುವ ಸ್ಥಳವೊಂದಕ್ಕೆ ಮಹಿಳೆ ಯರು ಲಗ್ಗೆಯಿಡುತ್ತಿರುವ ಇನ್ನೊಂದು ದೃಷ್ಟಾಂತ ಇದಾಗಿದೆ.
Related Articles
ಶಿಖರದ ತಪ್ಪಲಲ್ಲಿ ವಾಸವಿರುವ ಕಾಣಿ ಆದಿವಾಸಿಗಳು ಧನ್ಯಾ ಅವರು ಅಗಸ್ತ್ಯರ್ಕೂಡಂಗೆ ಚಾರಣ ಕೈಗೊಂಡಿರುವುದನ್ನು ವಿರೋಧಿಸಿ ಚಾರಣ ಆರಂಭವಾಗುವ ಬೋನಕಾಡ್ನಲ್ಲಿ ಪ್ರತಿಭಟನೆ ನಡೆಸಿದರು. ಮಹಿಳೆಯರನ್ನೊಳಗೊಂಡಂತೆ 100ಕ್ಕೂ ಅಧಿಕ ಆದಿವಾಸಿಗಳು ಜಾನಪದ ಹಾಡುಗಳನ್ನು ಹಾಡಿ ವಿಶಿಷ್ಟವಾಗಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಆದರೆ ಕೋರ್ಟು ಆದೇಶವಿರುವುದರಿಂದ ಚಾರಣಕ್ಕೆ ತಡೆಯೊಡ್ಡುವುದಕ್ಕೆ ಹೋಗಲಿಲ್ಲ.
Advertisement
ಆದಿವಾಸಿಗಳು ಹೇಳುವುದೇನು?ಪರ್ವತ ವಲಯ ಹಿಂದೂ ಸಪ್ತರ್ಷಿಗಳಲ್ಲಿ ಓರ್ವರಾದ ಅಗಸ್ತ್ಯ ಮುನಿಯ ಪವಿತ್ರ ವಾಸಸ್ಥಾನವಾಗಿತ್ತೆಂದು ಕಾಣಿ ಆದಿವಾಸಿಗಳು ಹೇಳು ತ್ತಾರೆ. ಅಲ್ಲಿ ಅಗಸ್ತ್ಯರ ವಿಗ್ರಹವಿದ್ದು ಶಿಖರಕ್ಕೆ ತೆರಳುವುದಕ್ಕೆ ಮಹಿಳೆಯರಿಗೆ ಪರಂಪರಾಗತವಾಗಿ ಅವಕಾಶ ಇಲ್ಲವೆಂಬುದು ಅವರ ವಾದವಾಗಿದೆ.