Advertisement

ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವನಿಂದ ನವ ವಿವಾಹಿತೆಯ ಕೊಲೆ

11:49 AM Sep 06, 2018 | Team Udayavani |

ಮುಜಫ‌ರನಗರ : ಹೆಚ್ಚಿನ ವರದಕ್ಷಿಣೆಯ ಬೇಡಿಕೆಯನ್ನು ಹೆತ್ತವರ ಪೂರೈಸದ ಕಾರಣಕ್ಕೆ, ಮದುವೆಯಾಗಿ ಕೇವಲ ಐದು ತಿಂಗಳಾಗಿದ್ದ 21ರ ಹರೆಯದ ಮಹಿಳೆಯನ್ನು ಕುತ್ತಿಗೆ ಬಿಗಿದು ಕೊಂದ ಆರೋಪದ ಮೇಲೆ ಮಹಿಳೆಯ ಪತಿ, ಅತ್ತೆ – ಮಾವನನ್ನು ಪೊಲೀಸರು ಬಂಧಿಸಿದ್ದಾರೆ. 

Advertisement

ಈ ವರ್ಷ ಎಪ್ರಿಲ್‌ ನಲ್ಲಿ ಮದುವೆಯಾಗಿದ್ದ ಜೋಗಿಯಖೇಡ ಗ್ರಾಮ ಆಮ್‌ರಿನ್‌ ಗೆ ಗಂಡನ ಮನೆಯಲ್ಲಿ ವರದಕ್ಷಿಣೆ ಹಿಂಸೆ ತೀವ್ರವಾಗಿತ್ತು. ಆಕೆಯ ಪತಿ, ಅತ್ತೆ ಮಾವ ಸೇರಿ ನಿನ್ನೆ ಬುಧವಾರ ನಿರ್ದಯವಾಗಿ ಆಕೆಯ ಕುತ್ತಿಗೆ ಬಿಗಿದು ಕೊಂದರು ಎಂದು ಫ‌ುಗಾನಾ ಪೊಲೀಸ್‌ ಠಾಣಾಧಿಕಾರಿ ದೇಶರಾಜ್‌ ಸಿಂಗ್‌ ತಿಳಿಸಿದ್ದಾರೆ. 

ಕೊಲೆಗೀಡಾಗಿರುವ ಮಹಿಳೆಯ ಮನೆಯವರ ಪ್ರತಿಭಟನೆ ನಡೆಸಿದ್ದು ಅಪರಾಧಿಗಳ ವಿರುದ್ಧ ಕಠಿನ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next