Advertisement

ಉದ್ಯಮಿ ಕೆ.ಪಿ.ನಂಜುಂಡಿ ವಿರುದ್ಧ ಕಿಡ್ನ್ಯಾಪ್ ಕೇಸ್‌ ದಾಖಲಿಸಿದ ಮಹಿಳೆ

11:21 AM Feb 23, 2017 | Team Udayavani |

ಬೆಂಗಳೂರು: ಲಕ್ಷ್ಮೀ ಗೋಲ್ಡ್‌ ಪ್ಯಾಲೇಸ್‌ನ ಮಾಲಿಕ, ಪ್ರಭಾವಿ ಮುಖಂಡ  ಕೆ.ಪಿ.ನಂಜುಂಡಿ ಅವರ ವಿರುದ್ದ ಮಹಿಳೆಯೊಬ್ಬರು ಅಪಹರಣ ದೂರು ದಾಖಲಿಸಿದ್ದಾರೆ. 

Advertisement

ಲಕ್ಷ್ಮೀ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಮ್ಯಾನೇಜರ್‌ ಆಗಿದ್ದ ವಿಜಯ್‌ ಕುಮಾರ್‌ ಎನ್ನುವವರ ಪತ್ನಿ ಆಲಮೇಲು ಎನ್ನುವವರು ವಿಜಯ ನಗರ ಪೊಲೀಸ್‌ ಠಾಣೆಯ ಲ್ಲಿ ದೂರು ನೀಡಿದ್ದು , ನನ್ನ ಪತಿಯನ್ನು  ಅಪಹರಿಸಿ 3 ದಿನಗಳ ಕಾಲ  ಮೈಸೂರಿನಲ್ಲಿ ಕೂಡಿ ಹಾಕಿ  ಅನ್ನ ನೀರು ನೀಡದೆ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ನಂಜುಂಡಿ ಸೇರಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ರಾಜನ್‌ , ರಾಮಕೃಷ್ಣ ಮತ್ತು ರಾಜು ಕಾರ್ಯ ಅವರ ವಿರುದ್ದ ದೂರು ದಾಖಲಾಗಿದೆ. 

ಕಚೇರಿಯಲ್ಲಿ  40 ಗ್ರಾಂ ಚಿನ್ನ ಕಳವಾಗಿತ್ತು,ಇದನ್ನು  ನಾನೇ ಕದ್ದಿದ್ದೇನೆ ಎಂದು ವಿಜಯ್‌ ಕುಮಾರ್‌ ಒಪ್ಪಿಕೊಂಡಿದ್ದು  ಅವನನ್ನು ನಾವು ಕಿಡ್ನ್ಯಾಪ್ ಮಾಡಿಲ್ಲ.ಪೊಲೀಸರು ತನಿಖೆ ಮಾಡುತ್ತಿದ್ದಾರೆ ವಿಷಯ ಬಯಲಿಗೆ ಬರುತ್ತದೆ ಎಂದು ನಂಜುಂಡಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ. 

ಆಲಮೇಲು ಅವರು ನನ್ನ ಪತಿಗೆ ನಂಜುಂಡಿ ಅವರ ಅಕ್ರಮಗಳು ಗೊತ್ತಿವೆ ಹೀಗಾಗಿ ಅಪಹರಣ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next