Advertisement

ಜ್ವರದಿಂದ ನಡು ರಸ್ತೆಯಲ್ಲೇ ಬಿದ್ದು ಮಹಿಳೆ ಸಾವು

02:53 PM Apr 30, 2021 | Team Udayavani |

ಮುಳಬಾಗಿಲು: ಸಾಮಾನ್ಯ ಜ್ವರದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರೂ ಕೊರೊನಾ ಸೋಂಕಿಗೆ ಹೆದರಿ ಯಾರೂ ಮುಟ್ಟದ ಕಾರಣ ನಾಲ್ಕೈದು ಗಂಟೆ ಕಾಲಮೃತದೇಹ ನಡುರಸ್ತೆಯಲ್ಲಿ ಬಿದ್ದಿದ್ದ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿನಡೆದಿದೆ.

Advertisement

ತಾಲೂಕಿನ ಸೊನ್ನವಾಡಿ ಗ್ರಾಪಂವ್ಯಾಪ್ತಿಯ ರವಿಕುಮಾರ್‌ ಅವರ ಪತ್ನಿನೀಲಮ್ಮ (48) ಮೃತರು. ಕೆಲವು ದಿನಗಳಿಂದ ನೀಲಮ್ಮ ಶೀತ, ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.ಅಂತೆಯೇ ಗುರುವಾರ ಬೆಳಗ್ಗೆ ಗ್ರಾಮದಲ್ಲಿನ ಮನೆಯತ್ತ ಹೋಗುತ್ತಿದ್ದಾಗ ಜ್ವರ ಹೆಚ್ಚಾಗಿ ನಡು ರಸ್ತೆಯಲ್ಲಿಯೇ ಬಿದ್ದು ಮೃತಪಟ್ಟಿದ್ದಾರೆ.

ಕೊರೊನಾ ಸೋಂಕಿನಿಂದ ಮೃತಪಟ್ಟಿರಬಹುದೆಂದು ಹೆದರಿದ ಗ್ರಾಮಸ್ಥರು, ಹತ್ತಿರ ಹೋಗಲು ಹೆದರುತ್ತಿದ್ದರು. ನಂತರ ಗ್ರಾಮದ ಮುಖಂಡರು ತಹಶೀಲ್ದಾರ್‌ ರಾಜಶೇಖರ್‌ ಮತ್ತು ವೈದ್ಯರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ವೈದ್ಯರು ಮೃತದೇಹವನ್ನು ಪರಿಶೀಲಿಸಿ ಸಾಮಾನ್ಯ ಜ್ವರದಿಂದ ಮೃತಪಟ್ಟಿದ್ದು, ಕೊರೊನಾ ಸೋಂಕು ಇಲ್ಲ ಎಂದು ದೃಢಪಡಿಸಿದರು.

ನಂತರ ತಹಶೀಲ್ದಾರ್‌ ರಾಜಶೇಖರ್‌ಮತ್ತು ರಾಜಸ್ವ ನಿರೀಕ್ಷಕ ಸುಬ್ರಮಣ್ಯಂಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಪಿಡಿಒ ಸರಿತಾ, ಗ್ರಾಮಸ್ಥರ ಸಹಕಾರದೊಂದಿಗೆ ಜೆಸಿಬಿ ಯಂತ್ರದ ಮೂಲಕ ಮೃತದೇಹ ಸಾಗಿಸಿಗ್ರಾಮದ ಅಂಚಿನಲ್ಲಿರುವ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು. ಮದ್ಯವ್ಯಸನಿಯಾಗಿದ್ದ ಪತಿ ರವಿಕುಮಾರ್‌,ಅತಿಯಾದ ಮದ್ಯ ಸೇವನೆ ಮಾಡಿದ್ದು,ಪತ್ನಿ ಮೃತಪಟ್ಟಿರುವ ಪರಿವೇ ಇಲ್ಲದಂತೆ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next