Advertisement

Actor Darshan: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್‌ಗೆ ಬಿಗ್‌ ರಿಲೀಫ್

12:27 PM Jan 21, 2024 | Team Udayavani |

ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ ಸಂಬಂಧ ನಟ ದರ್ಶನ್‌ಗೆ ಬಿಗ್‌ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು 150ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದಾರೆ.

Advertisement

ದೋಷಾರೋಪಪಟ್ಟಿಯಲ್ಲಿ ಪ್ರಮುಖವಾಗಿ “ಘಟನೆಗೂ ನಟ ದರ್ಶನ್‌ ಗೂ ಯಾವುದೇ ಸಂಬಂಧವಿಲ್ಲ. ಘಟನೆ ವೇಳೆ ದರ್ಶನ್‌ ಬೆಂಗಳೂರಿನಲ್ಲಿ ಇರಲಿಲ್ಲ. ಬೇರೆ ರಾಜ್ಯದಲ್ಲಿದ್ದರು. ಆದರಿಂದ ಇದೊಂದು ಭದ್ರತಾ ಲೋಪ’ ಎಂದು ಉಲ್ಲೇಖೀಸಿ ದರ್ಶನ್‌ ಮನೆ ಕೆಲಸಗಾರ ಆರೋಪಿ ಹೇಮಂತ್‌ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಲಿಸಿದ್ದಾರೆ.

ಪ್ರಕರಣದ ಆರೋಪಿ ಹೇಮಂತ್‌, ನಟ ದರ್ಶನ್‌, ಸಂತ್ರಸ್ತೆ ಅಮಿತಾ ಜಿಂದಲ್‌ ಸೇರಿ ಹಲವರ ಹೇಳಿಕೆ ಯನ್ನು ದೋಷಾ ರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ. ಜತೆಗೆ 5ಕ್ಕೂ ಹೆಚ್ಚು ಮಂದಿಯನ್ನು ಸಾಕ್ಷಿಗಳಾಗಿ ಪರಿಗಣಿಸಿರುವ ಪೊಲೀಸರು, ಅವರ ಹೇಳಿಕೆಯನ್ನು ದೋಷಾರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next