Advertisement

ಪಾಕ್ ಸೇನೆ ಕಿರುಕುಳ ಕೊಟ್ಟರೂ ಶತ್ರುಸೇನೆಗೆ ಮಾಹಿತಿ ಕೊಡದ ಅಭಿನಂದನ್!

09:11 AM Feb 28, 2019 | Sharanya Alva |

ನವದೆಹಲಿ: ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ಅವರನ್ನು ಪಾಕಿಸ್ತಾನ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಪಾಕ್ ಸೇನೆಯ ವರ್ತನೆ ಜಿನೇವಾ ಒಪ್ಪಂದದ ಉಲ್ಲಂಘನೆಯಾಗಿದೆ. ಶೀಘ್ರವೇ ನಮ್ಮ ಪೈಲಟ್ ಅನ್ನು ಕೂಡಲೇ ಭಾರತಕ್ಕೆ ಕಳುಹಿಸಿ, ಇಲ್ಲವೇ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ ಗುರುವಾರ ಎಚ್ಚರಿಕೆಯ ಸಂದೇಶ ರವಾನಿಸಿದೆ.

Advertisement

ಭಾರತ ಕಠಿಣ ನಿರ್ಧಾರಕ್ಕೆ ಮುಂದಾಗಲಿದೆ ಎಂಬ ಭಯದ ಬೆನ್ನಲ್ಲೇ ಪಾಕ್ ವಿದೇಶಾಂಗ ಸಚಿವಾಲಯ ಇದೀಗ ಭಾರತದ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಅಲ್ಲದೇ ಯುದ್ಧ ಕೈದಿ ಸ್ಥಾನ ಮಾನದ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ.

ರಹಸ್ಯ ಮಾಹಿತಿ ಪಾಕಿಸ್ತಾನ ಸೇನೆಗೆ ಸಿಗದಂತೆ ಮಾಡಲು ಅಭಿನಂದನ್ ಅವರು ನೀರಿಗೆ ಹಾರಿ ತನ್ನ ಬಳಿ ಇದ್ದ ಮಾಹಿತಿಯ ಮ್ಯಾಪ್, ಪತ್ರಗಳನ್ನು ನೀರಿಗೆ ಹಾಕಿದ್ದರು ಎಂದು ಮಾಧ್ಯಮದ ವರದಿ ತಿಳಿಸಿದೆ. ಅಷ್ಟೇ ಅಲ್ಲ ತನ್ನ ಬಳಿ ಉಳಿದಿದ್ದ ಮಾಹಿತಿಯ ದಾಖಲೆಗಳನ್ನು ನುಂಗಿ ನೀರು ಕುಡಿದಿರುವುದಾಗಿ ವರದಿ ವಿವರಿಸಿದೆ. ಈ ಮೂಲಕ ಅಭಿನಂದನ್ ಶತ್ರು ದೇಶಕ್ಕೆ ಯಾವ ಮಾಹಿತಿಯ ಸುಳಿವು ಸಿಗದಂತೆ ಮಾಡಿದ್ದಾರೆನ್ನಲಾಗಿದೆ.

ಒಂದೆಡೆ ಶಾಂತಿ ಮಾತುಕತೆಯ ನಾಟಕವಾಡುತ್ತಿರುವ ಪಾಕಿಸ್ತಾನ ಮತ್ತೊಂದೆಡೆ ಗುರುವಾರ ಮಧ್ಯಾಹ್ನದ ವೇಳೆ ಪಾಕಿಸ್ತಾನದ ಎರಡು ಜೆಟ್ ವಿಮಾನ ಭಾರತದ ವಾಯುಸೀಮೆಯನ್ನು ಉಲ್ಲಂಘಿಸಿ ಒಳಬರಲು ಪ್ರಯತ್ನಿಸಿದ್ದು ಈ ವೇಳೆ ಭಾರತೀಯ ವಾಯುಪಡೆ ಯುದ್ಧ ವಿಮಾನ ಹಿಮ್ಮೆಟ್ಟಿಸಿರುವುದಾಗಿ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next