Advertisement

“ತಂದೆಯ ಹತ್ಯೆಗೈದವರನ್ನು ಗಲ್ಲಿಗೇರಿಸುವವರೆಗೆ ಚಪ್ಪಲಿ ತೊಡುವುದಿಲ್ಲ’

07:10 PM Sep 16, 2022 | Team Udayavani |

ಉದಯ್‌ಪುರ: “ನನ್ನ ತಂದೆಯನ್ನು ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸುವವರೆಗೆ ನಾನು ಕಾಲಿಗೆ ಚಪ್ಪಲಿ, ಶೂ ತೊಡುವುದಿಲ್ಲ,’ ಎಂದು ರಾಜಸ್ಥಾನದ ಉದಯಪುರದಲ್ಲಿ ಜೂನ್‌ನಲ್ಲಿ ಹತ್ಯೆಯಾದ ಟೈಲರ್‌ ಕನ್ಹಯ್ಯಲಾಲ್‌ ಅವರ ಮಗ ಪ್ರತಿಜ್ಞೆ ಮಾಡಿದ್ದಾನೆ.

Advertisement

“ನನ್ನ ತಂದೆ ಹತ್ಯೆಯಾದ ದಿನದಿಂದಲೂ ನಾನು ಬರಿಗಾಲಿನಲ್ಲಿ ತಿರುಗಾಡುತ್ತಿದ್ದೇನೆ. ಅಪರಾಧಿಗಳನ್ನು ನೇಣಿಗೆ ಹಾಕುವವರೆಗೂ ಈ ಶಪಥ ಮುಂದುವರಿಯಲಿದೆ. ಈಗಲೂ ಸಹ ಆ ಘಟನೆಯಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ,’ ಎಂದು ಕನ್ಹಯ್ಯಲಾಲ್‌ ಪುತ್ರ ಯಶ್‌ ದುಃಖ ತೋಡಿಕೊಂಡಿದ್ದಾನೆ.

ಬಿಜೆಪಿ ವಕ್ತಾರೆ ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದಕ್ಕೆ 2022ರ ಜೂ.28ರಂದು ರಿಯಾಜ್‌ ಮತ್ತು ಗೌಸ್‌ ಮೊಹಮ್ಮದ್‌ ಎಂಬಿಬ್ಬರು ದುಷ್ಕರ್ಮಿಗಳು ಟೈಲರ್‌ ಕನ್ಹಯ್ಯಲಾಲ್‌ ಅವರ ಮಳಿಗೆಗೆ ನುಗ್ಗಿ ಶಿರಚ್ಛೇದ ಮಾಡಿ, ಹತ್ಯೆಗೈದಿದ್ದರು.

ಎನ್‌ಐಎ ಈ ಪ್ರಕರಣದ ತನಿಖೆ ನಡೆಸಿದ್ದು, ಪ್ರಕರಣ ಸಂಬಂಧ ಎಂಟು ಮಂದಿಯನ್ನು ಬಂಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next