Advertisement

ರಜನಿ ರಾಜಕೀಯ ಸೇರಿದ್ರೆ ಕೈ ಜೋಡಿಸಲು ಸಿದ್ಧ:ಕಮಲ್‌ 

10:30 AM Sep 16, 2017 | Team Udayavani |

ಚೆನ್ನೈ: ದಿಗ್ಗಜ ನಟರಾದ ರಜನಿಕಾಂತ್‌ ಮತ್ತು ಕಮಲಹಾಸನ್‌ ಅವರ ರಾಜಕೀಯ ಪ್ರವೇಶದ ಕುರಿತು  ತಮಿಳುನಾಡಿನ ಜನರಲ್ಲಿ ತೀವ್ರ ಕುತೂಹಲ ಕೆರಳಿದ್ದು  ಇಬ್ಬರೂ ಒಂದಾಗಿ ಹೋರಾಟ ಮಾಡುತ್ತಾರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.

Advertisement

ಮಾಧ್ಯಮಗಳಲ್ಲಿ ವರದಿಯಾದಂತೆ ಕಮಲ ಹಾಸನ್‌ ಅವರು ಸಂದರ್ಶನವೊಂದರಲ್ಲಿ  ರಜನಿ ಕಾಂತ್‌ ಅವರೊಂದಿಗೆ ಕೈ ಜೋಡಿಸುತ್ತೀರಾ ಎಂದು ಪ್ರಶ್ನಿದಾಗ ರಜನಿ ರಾಜಕೀಯ ಸೇರಿದರೆ ಕೈ ಜೋಡಿಸಲು ಸಿದ್ದ ಎಂದಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾನು ಮುಂದಾಗಿದ್ದು, ಹೊಸ ಪಕ್ಷ ಸ್ಥಾಪಿಸುವುದಾಗಿ ಕಮಲ ಹಾಸನ್‌ ಹೇಳಿದ್ದರು. 

ವರದಿಯಾದಂತೆ ಕಮಲ ಹಾಸನ್‌ ಅವರು ತಳ ಮಟ್ಟದಿಂದ ರಾಜಕೀಯ ಮಾಡಲು ಉದ್ದೇಶಿಸಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ. 

ರಜನಿ ಕಾಂತ್‌ ಅವರೂ ಕೆಲ ತಿಂಗಳ ಹಿಂದೆ ಅಭಿಮಾನಿಗಳ ಭೇಟಿ ಮಾಡಿ ರಾಜಕೀಯ ಪ್ರವೇಶಿಸುವ ಕುರಿತು ಚಿಂತನೆ ನಡೆಸಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next