Advertisement

ಉಗ್ರ ಹಫೀಜ್‌ ಸಯೀದ್‌ನನ್ನು ಪಾಕಿಸ್ಥಾನ ಭಾರತಕ್ಕೆ ಒಪ್ಪಿಸುವುದೇ ?

11:27 AM Mar 07, 2017 | udayavani editorial |

ಹೊಸದಿಲ್ಲಿ : 160ಕ್ಕೂ ಅಧಿಕ ಅಮಾಯಕ ಜೀವಗಳನ್ನು ಬಲಿಪಡೆದುಕೊಂಡಿದ್ದ  26/11ರ ಮುಂಬಯಿ ಮೇಲಿನ ಉಗ್ರ ದಾಳಿ ಪಾಕಿಸ್ಥಾನದ ಉಗ್ರರ (ಹಾಫೀಜ್‌ ಸಯೀದ್‌ ನೇತೃತ್ವದ ಜಮಾತ್‌ ಉದ್‌ ದಾವಾ ಉಗ್ರ ಸಂಘಟನೆಯ) ಕೃತ್ಯ ಎಂದು ಪಾಕಿಸ್ಥಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹಮ್ಮೂದ್‌ ಅಲಿ ದುರಾನಿ ಬಹಿರಂಗಪಡಿಸಿದ್ದು ಈಗಿನ್ನು ಇಸ್ಲಾಮಾಬಾದ್‌ ಮುಂಬಯಿ ದಾಳಿಕೋರರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದೇ ಎಂಬುದು ಕುತೂಹಲದ ವಿಷಯವಾಗಿದೆ.

Advertisement

ಮುಂಬಯಿ ಮೇಲಿನ ಉಗ್ರ ದಾಳಿ ಪಾಕ್‌ ಉಗ್ರರ ಕೃತ್ಯ ಎಂಬುದನ್ನು ದುರಾನಿ ಅವರು ಬಹಿರಂಗಪಡಿಸಿರುವ ವಿದ್ಯಮಾನವು ಭಾರತ ಸರಕಾರಕ್ಕೆ ಸಂದಿರುವ ಬಹುದೊಡ್ಡ ರಾಜತಾಂತ್ರಿಕ ವಿಜಯ ಎಂದು ಈ ನಡುವೆ ಬಿಜೆಪಿ ಹೇಳಿಕೊಂಡಿದೆ.

ಮುಂಬಯಿ ಮೇಲಿನ ಉಗ್ರ ದಾಳಿಯು ಪಾಕ್‌ ಉಗ್ರರ ಕೃತ್ಯ ಎಂಬುದನ್ನು ದುರಾನಿ ಅವರು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈಗಿನ್ನು ಇಸ್ಲಾಮಾಬಾದ್‌ 26/11ರ ದಾಳಿಯ ಪ್ರಧಾನ ಸೂತ್ರದಾರನಾಗಿರುವ ಮಾಸ್ಟರ್‌ ಮೈಂಡ್‌ ಹಾಫೀಜ್‌ ಸಯೀದ್‌ ನನ್ನು ಭಾರತದ ವಶಕ್ಕೆ ಒಪ್ಪಿಸುವುದೇ ಎಂಬುದೀಗ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next