Advertisement

ಮೋದಿ ಕೈ ಬಲಪಡಿಸಲು ಸೈನಿಕಳಂತೆ ಹೋರಾಡುವೆ

12:34 AM Mar 23, 2019 | Team Udayavani |

ಉಡುಪಿ: “ನರೇಂದ್ರ ಮೋದಿಯವರು ಮತ್ತು ನಾನು ಐದು ವರ್ಷಗಳಲ್ಲಿ ಮಾಡಿರುವ ಸಾಧನೆ, ರಾಜ್ಯದ ಸಮ್ಮಿಶ್ರ ಸರಕಾರದ ವೈಫ‌ಲ್ಯವನ್ನು ಮುಂದಿಟ್ಟುಕೊಂಡು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸೈನ್ಯ ಮತ ಯಾಚನೆ ಆರಂಭಿಸಿದೆ’ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Advertisement

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗುವುದು ಖಚಿತ. ಉಡುಪಿ-ಚಿಕ್ಕಮಗಳೂರು ಜನತೆ ಕೂಡ ಮೋದಿಯವರ ಕೈ ಬಲಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಅಂಥ ವಾತಾವರಣ ಕ್ಷೇತ್ರದಾದ್ಯಂತ ಕಂಡು ಬರುತ್ತಿದೆ’ ಎಂದರು.

“ದೇಶದಲ್ಲಿ ಈ ಬಾರಿ ಬಿಜೆಪಿ ವಿರುದ್ಧ  ಮಹಾಘಟಬಂಧನ್‌ ರಚಿಸಲಾಗಿದೆ. ಅದರ ಮುಖಂಡರು ಕರ್ನಾಟಕದಲ್ಲಿಯೇ ಒಂದಾಗಿ ಸಂದೇಶ ನೀಡಿದ್ದರು. ಆದರೆ, ರಾಜ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಲೋಕಸಭಾ ಸೀಟಿಗಾಗಿ ಕಿತ್ತಾಡುವ ಮೂಲಕ ಘಟಬಂಧನ್‌ ರಾಜ್ಯದಲ್ಲಿಯೇ ವಿಫ‌ಲವಾಗಿರುವುದನ್ನು ತೋರಿಸಿಕೊಟ್ಟಿದ್ದಾರೆ. ನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕ ಇಲ್ಲ’ ಎಂದು ಶೋಭಾ ಹೇಳಿದರು.

“ಮಾ.22ರಂದು ಶುಭ ಮುಹೂರ್ತವೆಂದು ನಾಮಪತ್ರ ಸಲ್ಲಿಸಿದ್ದೇನೆ. ಸಾರ್ವಜನಿಕವಾಗಿ ಮಾ.26ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಅಂದು ಬೆಳಗ್ಗೆ 10ಕ್ಕೆ ಉಡುಪಿ ಚಿತ್ತರಂಜನ್‌ ಸರ್ಕಲ್‌ನಲ್ಲಿ ನಡೆಯುವ ಬೃಹತ್‌ ಕಾರ್ಯಕರ್ತರ ಸಮಾವೇಶದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಪಾಲ್ಗೊಳ್ಳಲಿದ್ದಾರೆ. ನಂತರ ನಾಮಪತ್ರ ಸಲ್ಲಿಸುತ್ತೇನೆ. ನಿರ್ಮಲಾ ಸೀತಾರಾಮನ್‌ ಮೀನುಗಾರರೊಂದಿಗೆ ಸಭೆ ನಡೆಸಲಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next