Advertisement

ತ್ರಿವಳಿ ತಲಾಖ್‌ ರದ್ದಾದ್ರೆ ಹೊಸ ಕಾನೂನು ಜಾರಿ

03:45 AM May 16, 2017 | Team Udayavani |

ನವದೆಹಲಿ: “ತ್ರಿವಳಿ ತಲಾಖ್‌ ಅಸಾಂವಿಧಾನಿಕ ಎಂದು ನ್ಯಾಯಾಲಯ ಘೋಷಿಸಿದ್ದೇ ಆದಲ್ಲಿ, ಮುಸ್ಲಿಮರ ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿ ಹೊಸ ಕಾನೂನನ್ನು ನಾವೇ ತರುತ್ತೇವೆ.’ ಹೀಗೆಂದು ತ್ರಿವಳಿ ತಲಾಖ್‌ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿದೆ.
 
ತ್ರಿವಳಿ ತಲಾಖ್‌ ಪದ್ಧತಿಯನ್ನು ರದ್ದು ಮಾಡಿದರೆ, ವಿಚ್ಛೇದನ ಪಡೆಯಲು ಮುಸ್ಲಿಂ ಪುರುಷರಿಗಿರುವ ಅವಕಾಶ ಗಳೇನು ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರವೆಂ ಬಂತೆ ಮಾತನಾಡಿದ ಅಟಾರ್ನಿ ಜನರಲ್‌ವುಕುಲ್‌ ರೋಹ ಟಗಿ, “ನ್ಯಾಯಾಲಯವು ತ್ರಿವಳಿ ತಲಾಖ್‌ ಅನ್ನು ಅಸಿಂಧು ಅಥವಾ ಅಸಾಂವಿಧಾನಿಕ ಎಂದು ಘೋಷಿಸಿದರೆ, ಕೂಡಲೇ ಸರ್ಕಾರವು ಮುಸ್ಲಿಮರ ಮದುವೆ, ವಿಚ್ಛೇದನಕ್ಕೆ ಸಂಬಂಧಿಸಿ ಹೊಸ ಕಾನೂನನ್ನು ಜಾರಿ ಮಾಡಲಿದೆ,’ ಎಂದರು.

Advertisement

ಇದಕ್ಕೂ ಮುನ್ನ ನ್ಯಾಯಪೀಠವು, ಸಮಯದ ಅಭಾವವಿರುವ ಕಾರಣ ಸದ್ಯಕ್ಕೆ 3 ಬಾರಿ ವಿಚ್ಛೇದನ ಹೇಳುವುದಕ್ಕೆ ಸಂಬಂಧಿಸಿಯಷ್ಟೇ ವಿಚಾರಣೆ ನಡೆಸುತ್ತೇವೆ. ಬಹುಪತ್ನಿತ್ವ, ನಿಕಾಹ್‌ ಹಲಾಲಾ ಮತ್ತಿತರ ವಿಚಾರಗಳನ್ನು ಭವಿಷ್ಯದಲ್ಲಿ ಚರ್ಚಿಸೋಣ ಎಂದು ಹೇಳಿತು.
 

Advertisement

Udayavani is now on Telegram. Click here to join our channel and stay updated with the latest news.

Next