Advertisement

“ಬಚ್ಚಾ’ಎನಿಸಿಕೊಂಡವರು ಪ್ರಧಾನಿಯಾಗುವರೇ?:

02:50 AM Apr 05, 2019 | Team Udayavani |

ಬೆಳಗಾವಿ: ಬಚ್ಚಾ ಹಾಗೂ ಅಮುಲ್‌ ಬೇಬಿ ಎಂದು ಕರೆಸಿಕೊಳ್ಳುವ ರಾಹುಲ್‌ ಗಾಂಧಿ ದೇಶದ ಪ್ರಧಾನಿಯಾಗಲು ಸಾಧ್ಯವೇ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ವ್ಯಂಗ್ಯವಾಡಿದ್ದಾರೆ.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಈಗ ದೇಶದಲ್ಲಿ ನೆಲೆ ಇಲ್ಲ. ಹೀಗಾಗಿ, ಸ್ವತ: ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ತಮ್ಮ ಕೇÒತ್ರದಲ್ಲಿ ಸೋಲುವ ಭೀತಿಯಿಂದ ಬೇರೆ ಕ್ಷೇತ್ರ ನೋಡಿಕೊಂಡಿದ್ದಾರೆ. ಮೋದಿ ಅವರನ್ನು ಸೋಲಿಸಲು ಹುಟ್ಟಿಕೊಂಡಿರುವ ಮಹಾಘಟಬಂಧನ್‌ದಲ್ಲಿ ಒಗ್ಗಟ್ಟೇ ಇಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈಗ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಧಾರವಾಡ, ಹಾವೇರಿಯ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ, ಕರ್ನಾಟಕದಲ್ಲಿ ಬಿಜೆಪಿ 20 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ ಏನೇ ಸಾಹಸ ಮಾಡಿದರೂ ಗೆಲುವು ನಮ್ಮದೇ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next