Advertisement

ಕೆಲವೇ ದಿನದಲ್ಲಿ ಕೇಳಲಿದೆ ಪೆಪ್ಪೆರೆರೆ ಪೆರೆರೆರೆ !

12:27 AM Jun 27, 2019 | mahesh |

ರಂಗೀನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶ ದೊಂದಿಗೆ ರೆಡಿಯಾದ ‘ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ನವೀನ್‌ ಡಿ. ಪಡೀಲ್, ಭೋಜರಾಜ್‌ ವಾಮಂಜೂರ್‌, ಅರವಿಂದ ಬೋಳಾರ್‌, ಜೆ.ಪಿ. ತೂಮಿನಾಡು, ಸತೀಶ್‌ ಬಂದಲೆ ಮೊದಲಾದವರ ಜತೆಯಲ್ಲಿ ಶೋಭರಾಜ್‌ ಪಾವೂರು ಪ್ರಮುಖ ಪಾತ್ರದಲ್ಲಿ ನಟಿಸಲಿರುವ ಪೆಪ್ಪೆರೆರೆ ಪೆರೆರೆರೆ ಎಂಬ ಭಿನ್ನ ಸಿನೆಮಾ ಕೋಸ್ಟಲ್ವುಡ್‌ನ‌ಲ್ಲಿ ಭಾರೀ ಸದ್ದು ಮಾಡುತ್ತಿದೆ. ಸದ್ಯ ಎಲ್ಲಾ ಹಂತದ ಶೂಟಿಂಗ್‌ ಮುಗಿಸಿರುವ ಈ ಸಿನೆಮಾದ ಒಂದು ಹಾಡಿನ ಶೂಟಿಂಗ್‌ ಮಾತ್ರ ಬಾಕಿ ಇದೆ. ಕೆಲವೇ ದಿನದಲ್ಲಿ ಹಾಡಿನ ಚಿತ್ರೀಕರಣ ಕೂಡ ನಡೆಯಲಿದೆ.

Advertisement

ಈ ಸಿನೆಮಾದ ಟೈಟಲೇ ಒಂದು ಭಿನ್ನತೆಯನ್ನು ಹೊಂದಿದೆ. ಶೋಭರಾಜ್‌ ಅವರು ತುಳು ರಂಗಭೂಮಿಯಿಂದ ಅರಳಿದ ಪ್ರತಿಭೆ. ಆನಂತರ ಸಿನೆಮಾ ರಂಗದಲ್ಲಿ ಮತ್ತು ಕಿರುತೆರೆಯಲ್ಲಿ ಅವರು ಮಾಡಿರುವ ಸಾಧನೆ ಉಲ್ಲೇಖನೀಯ. ಈ ಹಿಂದೆ ‘ಏಸ’ ಎಂಬ ಸಿನೆಮಾದಲ್ಲಿ ದುಡಿದು ತನ್ನ ಪ್ರತಿಭೆಯನ್ನು ತೋರಿಸಿದವರು. ಕಥೆ, ಸಂಭಾಷಣೆಯಲ್ಲೂ ಕೈಯಾಡಿಸಿದ್ದಾರೆ. ಏಸ ಸಿನೆಮಾಕ್ಕೂ ಇವರದ್ದೇ ಕಥೆ. ಅದೊಂದು ಯಕ್ಷಗಾನ ಕಲಾವಿದನನ್ನು ಕೇಂದ್ರೀಕರಿಸಿ ಹೆಣೆದ ಕಥೆಯಾಗಿತ್ತು. ಕೋಸ್ಟಲ್ವುಡ್‌ನ‌ಲ್ಲಿ ಈ ಸಿನೆಮಾ ಸ್ಟಾರ್‌ ಮಾನ್ಯತೆಯನ್ನು ಪಡೆದಿತ್ತು. ಸಿನೆಮಾ ಅಂದರೆ ಹೀಗಿರಬೇಕು ಎಂಬ ರೀತಿಯಲ್ಲಿ ಜನರು ಮಾತನಾಡುವಂತಾಗಿತ್ತು.

ಹೀಗಾಗಿ ಹಿಂದಿನ ಎಲ್ಲ ಅನುಭವಗಳನ್ನು ಸೇರಿಸಿಕೊಂಡು ಮತ್ತಷ್ಟು ಪ್ರಬುದ್ಧರಾಗಿ ‘ಪೆಪ್ಪೆರೆರೆ ಪೆರೆರೆರೆ’ ರೆಡಿ ಮಾಡುವಲ್ಲಿ ಶೋಭರಾಜ್‌ ವಿಶೇಷ ಆದ್ಯತೆ ನೀಡಿದ್ದರು.

ನಿಶಾನ್‌ ಮತ್ತು ವರುಣ್‌ ನಿರ್ಮಾಪಕರಾಗಿರುವ ಈ ಸಿನೆಮಾದ ಬಹುತೇಕ ಚಿತ್ರೀಕರಣ ಮಂಗಳೂರಿನಲ್ಲಿಯೇ ನಡೆದಿದೆ. ಶೋಭರಾಜ್‌ ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರು ಬಾಯಾರ್‌ ಸಂಗೀತದಲ್ಲಿ ಮೂಡಿ ಬಂದಿರುವ ನಾಲ್ಕು ಹಾಡುಗಳು ಈ ಸಿನೆಮಾದಲ್ಲಿದೆ. ಹಾಡುಗಳ ಸಾಹಿತ್ಯ ಶಶಿರಾಜ್‌ ಕಾವೂರು ಹಾಗೂ ಉಮೇಶ್‌ ಮಿಜಾರು ಅವರದ್ದು. ಹಾಡುಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಇದು ಪ್ರತಿಭೆಗಳಿಗೊಂದು ಹೊಸ ಅವಕಾಶ. ಇಲ್ಲಿರುವ ನಾಲ್ಕು ಪ್ರಮುಖ ಪಾತ್ರಧಾರಿಗಳು ಹೀರೋಗಳು. ಜತೆಗೆ ಚೈತ್ರಾ ಶೆಟ್ಟಿ ಮತ್ತು ಮೈತ್ರಿ ಕಶ್ಯಪ್‌ ಅವರದ್ದೂ ಮುಖ್ಯ ಪಾತ್ರವಿದೆ.

Advertisement

Udayavani is now on Telegram. Click here to join our channel and stay updated with the latest news.

Next