Advertisement

ಮುಂದುವರಿದ ಕಾಡಾನೆ ಹಾವಳಿ: ಭತ್ತದ ಗದ್ದೆ ನಾಶ

11:55 PM Feb 16, 2023 | Team Udayavani |

ಸುಬ್ರಹ್ಮಣ್ಯ: ಭತ್ತದ ಗದ್ದೆಗೆ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಫ‌ಸಲು ನಾಶ ಮಾಡಿರುವ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲದಲ್ಲಿ ನಡೆದಿದೆ.

Advertisement

ಕರಿಂಬಿಲ ರವಿಪ್ರಸಾದ್‌ ಅವರ ಗದ್ದೆಗೆ ಬುಧವಾರ ರಾತ್ರಿ ಕಾಡಾನೆ ದಾಳಿಯಿಟ್ಟು ಅಪಾರ ಪ್ರಮಾಣದ ಪೈರು ನಾಶ ಮಾಡಿದೆ. ಕಾಡಾನೆ ಗದ್ದೆಯಲ್ಲಿ ನಡೆದಾಡಿದ ಪರಿಣಾಮ ಭತ್ತದ ತೆನೆಗಳೂ ನಲಕಚ್ಚಿವೆ. ಘಟನೆಯಲ್ಲಿ ಅಪಾರ ನಷ್ಟ ಸಂಭವಿಸಿದೆ. ಈ ಭಾಗದ ಇನ್ನೂ ಕೆಲವು ರೈತರ ಗದ್ದೆಗಳಲ್ಲಿ ಆನೆ ದಾಂಧಲೆ ನಡೆಸಿದೆ.

ಕಳೆದ ಹಲವು ದಿನಗಳಿಂದ ನೂಜಿಬಾಳ್ತಿಲ, ರೆಂಜಿಲಾಡಿ ಭಾಗದಲ್ಲಿ ಕಾಡಾನೆ ಹಾವಳಿಗೆ ಗದ್ದೆ, ತೋಟದ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಘಟನೆ ಬಗ್ಗೆ ಸ್ಥಳೀಯರು ಅರಣ್ಯಾಧಿಕಾರಿಗಳು, ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next