Advertisement

Madikeri ತಲಕಾವೇರಿ ಕ್ಷೇತ್ರದಲ್ಲಿ ಕಾಡಾನೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

11:37 PM Nov 07, 2023 | Team Udayavani |

ಮಡಿಕೇರಿ: ಇಲ್ಲಿನ ತಲಕಾವೇರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ‌ಲ್ಲಿ ಬೆಳಗ್ಗೆ ಕಾಡಾನೆ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಬೆಳಗ್ಗೆ ಕೈಲಾಶ ಆಶ್ರಮ ಬಳಿಯ ತಲಕಾವೇರಿ ಪ್ರವೇಶ ದ್ವಾರದ ಭಾಗದಲ್ಲಿ ಕಾಡಾನೆ ತಿರುಗಾಡಿದೆ. ದ್ವಾರದ ಗೇಟ್‌ ಮುಚ್ಚಿದ್ದರಿಂದ ಒಳಗೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದು ತುಲಾಮಾಸ ಕಾವೇರಿ ಜಾತ್ರೆಯ ಅವಧಿಯಾಗಿದ್ದು, ಪ್ರತಿದಿನ ಸಾವಿರಾರು ಭಕ್ತರು ತಲಕಾವೇರಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಸುತ್ತಲೂ ಬೆಟ್ಟ, ಕಾಡುಗಳಿಂದ ಆವೃತ್ತವಾಗಿರುವ ಈ ಪ್ರದೇಶದಲ್ಲಿ ಏಕಾಏಕಿ ಕಾಡಾನೆಗಳು ನುಗ್ಗಿ ಬಂದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಗಾಮಸ್ಥರು.

ಈಗಾಗಲೇ ಕಾಡಾನೆ ಏಲಕ್ಕಿ ಮತ್ತು ಬಾಳೆ ಫ‌ಸಲನ್ನು ನಾಶಪಡಿಸಿದೆ. ಆನೆಯನ್ನು ಓಡಿಸುವಂತೆ ಈ ಭಾಗದ ನಿವಾಸಿಗಳು ಒತ್ತಾಯಿಸಿದ ಹಿನ್ನೆಲೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬಂದಿ ಪಕ್ಕದ ಕಾಡಿನಲ್ಲಿ ಆನೆ ಇರುವುದನ್ನು ಪತ್ತೆ ಹಚ್ಚಿದರು. ಅನಂತರ ಸ್ಥಳೀಯರ ಸಹಕಾರ ಪಡೆದು ಕಾಡಾನೆಯನ್ನು ಮರಳಿ ಕಾಡಿಗೆ ಅಟ್ಟುವಲ್ಲಿ ಸಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next