Advertisement

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಆತಂಕ

11:54 PM Mar 24, 2023 | Team Udayavani |

ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗುಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಂಡುಬಂದ ಘಟನೆ ಶುಕ್ರವಾರ ನಡೆದಿದೆ. ಕಾಡಾನೆ ನೀರು ಕುಡಿಯಲು ಆಗಮಿಸಿದೆ ಎನ್ನಲಾಗಿದ್ದು ಬಳಿಕ ಅರಣ್ಯದತ್ತ ತೆರಳಿದೆ ಎಂದು ತಿಳಿದುಬಂದಿದೆ.

Advertisement

ಐತ್ತೂರು: ರಸ್ತೆಗೆ ಬಂದ ಕಾಡಾನೆ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಐತ್ತೂರು – ಕೊಣಾಜೆ ಸಂಪರ್ಕ ರಸ್ತೆಯಲ್ಲಿ ಶುಕ್ರವಾರ ಸಂಜೆ ಕಾಡಾನೆ ಕಾಣಸಿಕ್ಕಿದ್ದು, ವೀಡಿಯೋ ವೈರಲ್‌ ಆಗಿದೆ.

ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಸಮೀಪ ರಾಮನಗರ ಕ್ರಾಸ್‌ ಎಂಬಲ್ಲಿ ಕಾಡಾನೆ ರಬ್ಬರ್‌ತೋಟದಿಂದ ಆಗಮಿಸಿ ರಸ್ತೆ ದಾಟಿ ಇನ್ನೊಂದು ಭಾಗದ ರಬ್ಬರ್‌ ತೋಟದತ್ತ ಳಿಡುತ್ತ ಸಾಗಿದೆ. ಕೆಲಸದಿಂದ ಮನೆಗೆ ರಸ್ತೆಯಲ್ಲಿ ತೆರಳುತ್ತಿದ್ದವರಿಗೆ ಕಾಡಾನೆ ಕಾಣಸಿಕ್ಕಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next