Advertisement

ಮಡಿಕೇರಿಯಲ್ಲಿ ಕಾಡಾನೆಗಳ ಲಗ್ಗೆ: ಗದ್ದೆಗಳಿಗೆ ಹಾನಿ

12:40 PM Aug 24, 2020 | sudhir |

ಮಡಿಕೇರಿ: ಅಭ್ಯತ್‌ಮಂಗಲ ಗ್ರಾಮಕ್ಕೆ ರವಿವಾರ ಮತ್ತೆ ಕಾಡಾನೆಗಳು ಲಗ್ಗೆ ಇರಿಸಿದ್ದು, ಅಂಚೆಮನೆ ಕುಟುಂಬಕ್ಕೆ ಸೇರಿದ ಗದ್ದೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ಕಾರ್ಯಾಚರಣೆ ನಡೆಸಿ ಈ ಕಾಡಾನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿತ್ತು.

Advertisement

ಎಂಟು ಕಾಡಾನೆಗಳಿದ್ದ ಹಿಂಡು ನಾಟಿ ಕಾರ್ಯ ಮುಗಿಸಿದ್ದ ಗದ್ದೆಗೆ ದಾಳಿ ಇಟ್ಟು ಸಂಪೂರ್ಣ ನಾಶಪಡಿಸಿವೆೆ. ಎರಡು ವಾರಗಳ ಹಿಂದೆ ಇದೇ ಗದ್ದೆಗಳಿಗೆ ಆನೆಗಳು ಹಾನಿ ಮಾಡಿದ ಕಾರಣ ಮರು ನಾಟಿ ಕಾರ್ಯ ಮಾಡಲಾಗಿತ್ತು.

ಆದರ್ಶ್‌, ಅಶ್ವಥ್‌ ಕುಮಾರ್‌, ಸುಧಿ, ಬೆಟ್ಟದ ಕಾಡು ರಮೇಶ್‌ ಗಣಪತಿ ಸೇರಿದಂತೆ ಇನ್ನೂ ಕೆಲವು ಕೃಷಿಕರ ಗದ್ದೆಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next