Advertisement

ಕುಕ್ಕೆ ಪೇಟೆಯಲ್ಲಿ ಕಾಡಾನೆ ಸವಾರಿ; ಕಾಶಿಕಟ್ಟೆ ಗಣಪತಿ ದೇವಸ್ಥಾನ ಬಳಿ ಗಜರಾಜ ಪ್ರತ್ಯಕ್ಷ

09:52 AM Feb 21, 2020 | keerthan |

ಸುಬ್ರಹ್ಮಣ್ಯ; ಪುರಾಣ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಜನಸಂಚಾರ ಪೇಟೆಯಲ್ಲಿ ಒಂಟಿ ಸಲಗವೊಂದು ಗುರುವಾರ ಬೆಳಗ್ಗಿನ ಜಾವ ರಾಜಾರೋಷವಾಗಿ ಸಂಚರಿಸಿ ಭೀತಿ ಹುಟ್ಟಿಸಿದೆ.

Advertisement

ಇಂದು ಬೆಳಗ್ಗೆ ಸುಮಾರು 5:46ರ ಸಮಯಕ್ಕೆ ಮುಖ್ಯ ಪೇಟೆಯ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಪಕ್ಕದ ಮಯೂರ ವಸತಿಗ್ರಹದ ಬಳಿಯಿಂದ ಕಾಶಿಕಟ್ಟೆ ಮುಖ್ಯ ಮಾರ್ಗವಾಗಿ ನೂಚಿಲ ಕಡೆಗೆ ಆನೆ ರಸ್ತೆಯಲ್ಲೇ ಸಂಚರಿಸಿದೆ.

ವಾಹನ ಸಂಚಾರವಿರುವಾಗಲೇ ರಾಜ ಗಾಂಭೀರ್ಯದಿಂದ ಈ ಗಜರಾಜ ಹೆಜ್ಜೆ ಹಾಕಿದೆ. ಮೊದಲು ಕ್ಷೇತ್ರಕ್ಕಾಗಮಿಸಿದ ಭಕ್ತರು ಇದು ದೇಗುಲದ ಆನೆ ಆಗಿರಬಹುದು ಎಂದೆ ನಂಬಿದ್ದರು. ಆದರೆ ಇದು ಕಾಡಾನೆ ವಾಸ್ತವದಲ್ಲಿ ಎಂದು ನಂತರ ತಿಳಿದುಬಂದಿದೆ.

ಕೆಲ ದಿನಗಳ ಹಿಂದೆಯಷ್ಟೆ ಬೆಳಗಿನ ಜಾವ ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆಯಲ್ಲಿ ಸ್ಕೂಟಿಯಲ್ಲಿ ತೆರಳುತಿದ್ದ ಕಾಲೇಜು ಸಿಬಂದಿಯೋರ್ವರಿಗೆ ಅರಂಪಾಡಿ ಬಳಿ ಆನೆ ರಸ್ತೆ ದಾಟುತ್ತಿರುವುದು ಕಂಡು ಬಂದಿತ್ತು. ಹರಿಹರ ಪಳ್ಳತ್ತಡ್ಕ ಮುಖ್ಯ ಪೇಟೆಯಲ್ಲಿ ಆನೆ ಇತ್ತೀಚೆಗೆ ಸಂಚಾರ ನಡೆಸಿ ಭೀತಿ ಹುಟ್ಟಿಸಿತ್ತು

Advertisement

Udayavani is now on Telegram. Click here to join our channel and stay updated with the latest news.

Next