Advertisement

Ramanagara: ಒಂಟಿ ಸಲಗ ದಾಳಿಗೆ ವ್ಯಕ್ತಿ ಸಾವು

10:30 AM Dec 17, 2023 | Team Udayavani |

ರಾಮನಗರ: ವ್ಯಕ್ತಿಯೊಬ್ಬ ರೇಷ್ಮೆ ಮನೆಗೆ ತೆರಳುವ ವೇಳೆ ಗ್ರಾಮದೊಳಗೆ ನುಗ್ಗಿದ ಕಾಡಾನೆ ಒಂಟಿ ಸಲಗ ದಾಳಿಗೆ ಮೃತಪಟ್ಟ ಘಟನೆ ಹಾರೋಹಳ್ಳಿ ತಾಲೂಕಿನ ಹರಳಿಕರೆ ದೊಡ್ಡಿ‌ ಗ್ರಾಮದಲ್ಲಿ ನಡೆದಿದೆ.

Advertisement

ತಿಮ್ಮಪ್ಪ (64) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ.

ತಿಮ್ಮಪ್ಪ ಅವರು ಮುಂಜಾನೆ‌ ಜಮೀನಿಗೆ ತೆರಳಿದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಮೃತ ದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರತಿ ನಿತ್ಯ ಗ್ರಾಮದ ಒಳಗೆ ಆಗಮಿಸಿ ಉಪಟಳ ನೀಡುತ್ತಿರುವ‌ ಕಾಡಾನೆ‌ಗಳ ಹಾವಳಿಯಿಂದ ಹರಳಿಕರೆ ದೊಡ್ಡಿ ಸುತ್ತಮತ್ತಲ‌ ಗ್ರಾಮಸ್ಥರು ಭಯದಲ್ಲಿ‌ ಜೀವನ ಸಾಗಿಸುವಂತಾಗಿದೆ.

ಕೈ ಗೆ ಬಂದ ತುತ್ತು ಬಾಯಿಗೆ ಬಾರದಂತೆ ಕಾಡಾನೆಗಳ ಹಿಂಡು.ಬೆಳೆ ನಾಶ ಪಡಿಸುತ್ತಿವೆ ಎಂಬುದು ಗ್ರಾಮಸ್ಥರ ದೂರು.

Advertisement

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next