Advertisement

Ramanagara: ಕಾಡಾನೆ ದಾಳಿಗೆ ವ್ಯಕ್ತಿ ಮೃತ್ಯು: ತಿಂಗಳ ಅಂತರದಲ್ಲಿ ಮೂರನೇ ಬಲಿ

03:42 PM Dec 27, 2023 | Team Udayavani |

ರಾಮನಗರ: ಮನೆ ಬಳಿಯ ಕಾಡಿಗೆ ಕಟ್ಟಿಗೆ ತರಲು ಹೋದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಕನಕಪುರ ತಾಲೂಕಿನ ಬನ್ನಮುಕ್ಕೋಳ್ಲು ಗ್ರಾಮದಲ್ಲಿ ಘಟನೆ.

Advertisement

ರಾಮಕೃಷ್ಣ (52) ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿ.

ಗ್ರಾಮದ ಸಮೀಪವೇ ಇರುವ ಕಾಡಿಗೆ ಕಟ್ಟಿಗೆ ತರಲು ರಾಮಕೃಷ್ಣ ತೆರಳಿದ್ದಾರೆ ಈ ವೇಳೆ ಕಾಡಾನೆ ದಾಳಿ ನಡೆಸಿದೆ ಈ ವೇಳೆ ಗಂಭೀರ ಗಾಯಗೊಂಡ ರಾಮಕೃಷ್ಣ ಅವರು ಸಾವನ್ನಪಿದ್ದಾರೆ.

ಕನಕಪುರ ತಾಲೂಕಿನಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು ತಿಂಗಳ ಅಂತರದಲ್ಲೇ ಮೂರು ಜನರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೋಡಿಹಳ್ಳಿ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಕನಕಪುರ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: RSS-ಬಿಜೆಪಿಗೆ ಸ್ವಂತ ಇತಿಹಾಸವಿಲ್ಲ; ಬಿಕೆ ಹರಿಪ್ರಸಾದ್ ಹೇಳಿಕೆ ಸಮರ್ಥಿಸಿದ ಪ್ರಿಯಾಂಕ ಖರ್ಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next