Advertisement

Elephant: ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಕಾಡಾನೆ ಹಾವಳಿ; ಬೆಳೆ ನಾಶ, ಭಯದಲ್ಲಿ ಗ್ರಾಮಸ್ಥರು

12:30 PM Jan 29, 2024 | Team Udayavani |

ದಾಂಡೇಲಿ: ತಾಲೂಕಿನ ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಕಳೆದ ಕೆಲವು ದಿನಗಳಿಂದ ಒಂಟಿ ಸಲಗವೊಂದರ ಹಾವಳಿ ಜೋರಾಗಿದ್ದು, ಸ್ಥಳೀಯ ರೈತಾಪಿ ಜನರು ಹಾಗೂ ಸಾರ್ವಜನಿಕರು ಭಯಭೀತರಾಗುವಂತಾಗಿದೆ.

Advertisement

ಅಂಬೇವಾಡಿ, ಬರ್ಚಿ ರಸ್ತೆಯಲ್ಲಿ ಹಾಗೂ ಹತ್ತಿರದ ಮೌಳಂಗಿ, ವಿಟ್ನಾಳ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಒಂಟಿ ಸಲಗವೊಂದು ಕೃಷಿ ಜಮೀನಿಗೆ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿದೆ. ಸ್ಥಳೀಯ ರೈತರು ಬೆಳೆದ ಕಬ್ಬು, ಜೋಳ ಒಂಟಿ ಸಲಗನ ದಾಳಿಗೆ ನೆಲಕಚ್ಚಿವೆ.

ಸೋಮವಾರವು ಬೆಳಿಗ್ಗೆ ಆನೆ ಮತ್ತೆ ಸ್ಥಳೀಯರ ಕೃಷಿ ಜಮೀನಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆನೆಯನ್ನು ಓಡಿಸುವ ನಿಟ್ಟಿನಲ್ಲಿ ಪ್ರಯತ್ನ ಕೈಗೊಂಡಿದ್ದಾರೆ.

ಇದನ್ನೂ ಓದಿ: Land-For-Jobs Case: ಇಡಿ ಅಧಿಕಾರಿಗಳ ಮುಂದೆ ಹಾಜರಾದ ಲಾಲು ಪ್ರಸಾದ್ ಯಾದವ್

Advertisement

Udayavani is now on Telegram. Click here to join our channel and stay updated with the latest news.

Next