Advertisement

ಚಿಕ್ಕಮಗಳೂರು ; ಕಾಡಾನೆ ದಾಳಿಗೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳೇ ನಾಶ

02:22 PM Sep 26, 2020 | sudhir |

ಚಿಕ್ಕಮಗಳೂರು : ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಗೆ ಕಾಫಿ, ಏಲಕ್ಕಿ, ಬಾಳೆ , ಅಡಿಕೆ ತೋಟಗಳು ನಾಶವಾಗಿದ್ದು ಅಪಾರ ಹಾನಿ ಸಂಭವಿಸಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿರುವ ಸುರೇಶ್, ಗಿರೀಶ್, ಸಂದೀಪ್, ನಾರಾಯಣ ಎಂಬುವರಿಗೆ ಸೇರಿದ ತೋಟದಲ್ಲಿ ಈ ಘಟನೆ ನಡೆದಿದ್ದು ಆನೆಗಳ ದಾಳಿಯಿಂದ 80ಕ್ಕೂ ಹೆಚ್ಚು ಅಡಿಕೆ ಮರಗಳು ಧರೆಗುರುಳಿವೆ ಅಲ್ಲದೆ ಕಾಫಿ, ಏಲಕ್ಕಿ, ಬಾಳೆ ತೋಟಗಳಿಗೂ ಆನೆ ಲಗ್ಗೆ ಇಟ್ಟಿದ್ದು ಜನರು ಕಂಗಾಲಾಗಿದ್ದಾರೆ.

ಕಳೆದ ಹಲವಾರು ದಿನಗಳಿಂದ ಜಿಲ್ಲೆಯ ನಾನಾ ಕಡೆ ಆನೆಗಳ ಉಪಟಳ ಹೆಚ್ಚಾಗಿದ್ದು ಇದರಿಂದ ರೈತರ ಕಣ್ಣೆದುರೇ ಕೃಷಿ ತೋಟಗಳನ್ನು ನಾಶವಾಗುವ ದೃಶ್ಯಗಳನ್ನು ಕಂಡು ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ ;ಮಾಸ್ಕ್ ಹಾಕದಿದ್ದಕ್ಕೆ ದಂಡ ಹಾಕಿದ ಪೊಲೀಸರ ಬೈಕನ್ನೇ ಕಳ್ಳತನ ಮಾಡಿದ ಖದೀಮ!

Advertisement

Udayavani is now on Telegram. Click here to join our channel and stay updated with the latest news.

Next