Advertisement

Hanur: ಕಾಡಾನೆ ದಾಳಿ; 25ಕ್ಕೂ ಹೆಚ್ಚು ತೆಂಗಿನ ಮರಗಳಿಗೆ ಹಾನಿ

09:39 AM Jul 28, 2023 | Team Udayavani |

ಹನೂರು: ಕಾಡಾನೆ ದಾಳಿಗೆ 25ಕ್ಕೂ ಹೆಚ್ಚು ತೆಂಗಿನ ಮರಗಳು ಹಾಗೂ 5 ಮಾವಿನ ಮರಗಳು ನೆಲಕಚ್ಚಿರುವ ಘಟನೆ ಪೊನ್ನಾಚಿ ಗ್ರಾಮದಲ್ಲಿ ಜು.28ರ ಶುಕ್ರವಾರ ನಡೆದಿದೆ.

Advertisement

ಪೊನ್ನಾಚಿ ಗ್ರಾಮದ ರಾ.ಮಾದಪ್ಪ ಎಂಬವರ ಜಮೀನಿಗೆ ಶುಕ್ರವಾರ ಬೆಳಗ್ಗೆ 4 ಗಂಟೆಯ ವೇಳೆ ಲಗ್ಗೆ ಇಟ್ಟಿರುವ ಕಾಡಾನೆ ಮನಸ್ಸೋ ಇಚ್ಛೆ ತಿರುಗಾಡಿ ಜಮೀನಿನಲ್ಲಿದ್ದ 25ಕ್ಕೂ ಹೆಚ್ಚು ತೆಂಗಿನ ಮರಗಳು ಮತ್ತು 5 ಮಾವಿನ ಮರಗಳಿಗೆ ಹಾನಿಯುಂಟು ಮಾಡಿದೆ.

ಈ ಸಂಬಂಧ ಮಾತನಾಡಿದ ಜಮೀನಿನ ಮಾಲೀಕ ರಾ. ಮಾದಪ್ಪ ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ಕಲ್ಪಿಸಬೇಕು. ಈ ಆನೆಯನ್ನು ಬೇರೆಡೆಗೆ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next