Advertisement

Auto Rickshaw ಮೇಲೆ ಕಾಡುಕೋಣ ದಾಳಿ: ಬಾಲಕನಿಗೆ ಗಾಯ

12:38 AM Mar 04, 2024 | Team Udayavani |

ಬೆಳ್ತಂಗಡಿ: ರಿಕ್ಷಾದ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಬಾಲಕನೋರ್ವ ಗಾಯಗೊಂಡ ಘಟನೆ ಪುದುವೆಟ್ಟಿನಲ್ಲಿ ಸಂಭವಿಸಿದೆ.

Advertisement

ಪುದುವೆಟ್ಟು ರಿಕ್ಷಾ ಚಾಲಕ ಡೆನ್ನಿಸ್‌ ಅವರು ತನ್ನ ರಿಕ್ಷಾದಲ್ಲಿ ಮಗ ದಿಲ್ಸನ್‌(15) ಜತೆ ಧರ್ಮಸ್ಥಳ-ಮುಂಡಾಜೆ ಮೀಸಲು ಅರಣ್ಯದ ರಸ್ತೆಯಲ್ಲಿ ಶನಿವಾರ ರಾತ್ರಿ ಧರ್ಮಸ್ಥಳದಿಂದ ಪುದುವೆಟ್ಟು ಕಡೆಗೆ ಹೋಗುತ್ತಿದ್ದಾಗ ದಡಪಿತ್ತಿಲು ಎಂಬಲ್ಲಿ ಕಾಡುಕೋಣ ದಾಳಿ ನಡೆಸಿದೆ.

ಪರಿಣಾಮ ರಿಕ್ಷಾ ಮಗುಚಿ ಬಿದ್ದಿದ್ದು, ದಿಲ್ಸನ್‌ ತಲೆಗೆ ಗಾಯಗಳಾಗಿವೆ. ಆತನಿಗೆ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next