Advertisement

Andhra Pradesh: ಚಂದ್ರಬಾಬು ರಕ್ಷಣೆಗೆ ಪತ್ನಿ ಬಸ್‌ ಯಾತ್ರೆ

11:57 PM Oct 25, 2023 | Team Udayavani |

ಚಿತ್ತೂರು: ಆಂಧ್ರಪ್ರದೇಶದ ಮಾಜಿ ಸಿಎಂ ಎನ್‌.ಚಂದ್ರ ಬಾಬು ನಾಯ್ಡು ಪತ್ನಿ ಭುವನೇಶ್ವರಿ ಅವರು ಟಿಡಿಪಿ ಪುನರುಜ್ಜೀವನಕ್ಕಾಗಿ ಮತ್ತು ಪತಿಯನ್ನು ರಕ್ಷಿಸಲು ಖುದ್ದಾಗಿ ಅಖಾಡಕ್ಕೆ ಇಳಿದಿದ್ದಾರೆ. ಅದಕ್ಕಾಗಿ ಅವರು ಬುಧವಾರ ದಿಂದ ಸತ್ಯವೇ ಉಳಿಯಬೇಕು (ನಿಜಂ ಗೆಲವಾಲಿ) ಎಂಬ ಧ್ಯೇಯವಾಕ್ಯ ಹೊಂದಿರುವ ಯಾತ್ರೆಯನ್ನು ಆರಂಭಿಸಿದ್ದಾರೆ. ಬಸ್‌ ಮೂಲಕ ಕೈಗೊಳ್ಳಲಾಗುವ ಈ ಯಾತ್ರೆ ವಿವಿಧ ಹಂತಗಳಲ್ಲಿ ಆಂಧ್ರಪ್ರದೇಶದಾದ್ಯಂತ ನಡೆಯ ಲಿದೆ. ಮೊದಲ ಹಂತದಲ್ಲಿ ಚಂದ್ರಗಿರಿ, ತಿರುಪತಿ ಮತ್ತು ಶ್ರೀಕಾಳಹಸ್ತಿಯಲ್ಲಿ ನಡೆಯಲಿದೆ ಎಂದು ಟಿಡಿಪಿ ನಾಯಕರು ತಿಳಿಸಿದ್ದಾರೆ.

Advertisement

ಕೌಶ್ಯಲಾಭಿವೃದ್ಧಿ ಮಂಡಳಿ ಹಗರಣದಲ್ಲಿ ಪತಿ ಚಂದ್ರಬಾಬು ನಾಯ್ಡು ವಿರುದ್ಧ ವಿನಾ ಆರೋಪ ಹೊರಿಸಿ ಬಂಧಿಸ ಲಾಗಿದೆ. ಜಗ ನ್ಮೋಹನ ರೆಡ್ಡಿ ಸರಕಾರದ ಕ್ರಮದ ವಿರುದ್ಧ ಪ್ರತಿಭಟನಾರ್ಥವಾಗಿ ಈ ಯಾತ್ರೆಯನ್ನು ಅವರು ಹಮ್ಮಿ ಕೊಂಡಿದ್ದಾರೆ. ಸೆ.25ರಂದು ನಾಯ್ಡು ಅವರನ್ನು ಬಂಧಿ ಸಿದ ಬಳಿಕ ಜಾಮೀನು ಪಡೆಯಲು ಸುಪ್ರೀಂ ಕೋರ್ಟ್‌ ನಲ್ಲಿ ಕೂಡ ಕಾನೂನು ಹೋರಾಟ ನಡೆಸಿ ಸದ್ಯಕ್ಕೆ ಸೋಲು ಕಂಡಿದ್ದಾರೆ. ಅವರು ಜೈಲಿನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next