Advertisement

ಹಣಕ್ಕಾಗಿ ಪತಿಯನ್ನೇ ಅಪಹರಿಸಿದ್ದ ಪತ್ನಿ!

09:49 PM Nov 30, 2019 | Team Udayavani |

ದಾವಣಗೆರೆ:ಆರು ಮಂದಿ ಯುವಕರ ಜತೆ ಸೇರಿ ಹಣಕ್ಕಾಗಿ ಗಂಡನನ್ನೇ ಅಪಹರಿಸಿದ್ದ ಪತ್ನಿ ಈಗ ಹದಡಿ ಪೊಲೀಸರ ಅತಿಥಿಯಾಗಿದ್ದಾಳೆ.

Advertisement

ಶ್ರೀನಿವಾಸ್‌ ಕಿಡ್ನಾಪ್‌ ಆಗಿದ್ದ ಪತಿ. ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪತ್ನಿ ಸಂಗೀತ ಹಾಗೂ ಇಬ್ಬರು ಯುವಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ವರ್ಷಗಳಿಂದ ಪತಿಯಿಂದ ದೂರ ಇದ್ದ ಪತ್ನಿ ಸಂಗೀತಾ, ಹಣದ ಆಸೆಗೆ ಗಂಡನನ್ನು ಯುವಕರ ಜೊತೆ ಸೇರಿ ಕಿಡ್ನಾಪ್‌ ಮಾಡಿದ್ದಳು. ಸಂಗೀತಾಳ ನಡವಳಿಕೆ ಸರಿ ಇಲ್ಲ ಎಂಬ ಹಿನ್ನೆಲೆಯಲ್ಲಿ ಶ್ರೀನಿವಾಸ್‌ ಆಕೆಯಿಂದ ದೂರವಿದ್ದು, ಜಮೀನು ಹಾಗೂ ಪೆಟ್ರೋಲ್‌ ಬಂಕ್‌ ನೋಡಿಕೊಂಡಿದ್ದ. ಈಗ ಹಣದ ಅವಶ್ಯಕತೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸಂಗೀತಾ ಹಾಗೂ 6 ಜನ ಸೇರಿ ಶ್ರೀನಿವಾಸ ಅವರನ್ನು ಕಿಡ್ನಾಪ್‌ ಮಾಡಿದ್ದರು.

ಪ್ರತಿನಿತ್ಯದಂತೆ ಶ್ರೀನಿವಾಸ್‌ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್‌ ತೆರಳುವಾಗ ಆತನನ್ನು ಕಿಡ್ನಾಪ್‌ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತ ಹಾಗೂ ಇಬ್ಬರನ್ನು ಬಂಧಿ ಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next