Advertisement
ಹೊನ್ನಾಕಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ರೇಣುಕಾ ಪತಿ ಶಿವಲಿಂಗಪ್ಪ ಬೇವಿನಮಟ್ಟಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಏತನ್ಮಧ್ಯೆ ಪತ್ನಿ ರೇಣುಕಾಗೆ ಪತಿಯ ಶವಸಂಸ್ಕಾರಕ್ಕಿಂತ ಹಣವೇ ಹೆಚ್ಚಾಗಿತ್ತು.
ಅಂತ್ಯ ಸಂಸ್ಕಾರ ಮಾಡದೇ ಹೊರಟಿದ್ದ ಪತ್ನಿ ರೇಣುಕಾಳಿಗೆ ಗ್ರಾಮಸ್ಥರು ಛೀಮಾರಿ ಹಾಕಿದ್ದರು. ಆದರೆ ರೇಣುಕಾ ಗ್ರಾಮಸ್ಥರ ವಿರುದ್ಧವೇ ದೂರು ನೀಡುವ ಬೆದರಿಕೆ ಹಾಕಿ ತೆರಳಿದ್ದಳು ಎಂದು ಮಾಧ್ಯಮದ ವರದಿ ತಿಳಿಸಿದೆ. ಬಳಿಕ ಗ್ರಾಮಸ್ಥರೇ ಶಿವಲಿಂಗಪ್ಪ ಅವರ ಅಂತ್ಯಸಂಸ್ಕಾರ ನಡೆಸಿದ್ದರು. ಬಾಗಲಕೋಟೆ ಠಾಣೆಯಲ್ಲಿ ರೇಣುಕಾ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ.