Advertisement

ಪತಿ ಮಹದೇಶ್ವರ ದೇವರ ಪ್ರಸಾದ ತರಲಿಲ್ಲವೆಂದು ಆತ್ಮಹತ್ಯೆ  ಮಾಡಿಕೊಂಡ ಪತ್ನಿ

11:27 AM Mar 23, 2022 | Team Udayavani |

ರಾಮನಗರ: ಪತಿ ದೇವರ ಪ್ರಸಾದ ತರಲಿಲ್ಲ ಎಂಬ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಜರುಗಿದೆ.

Advertisement

ನಗರದ ವಿವೇಕಾನಂದನಗರ ಬಡಾವಣೆಯ ನಿವಾಸಿ ಶಿವನಂಜು ಪತ್ನಿ ಶ್ವೇತಾ (27) ಮೃತರು. ಈಕೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಗ್ರಾಮದವರು. ವಿವೇಕಾನಂದ ನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಡ ಶಿವನಂಜು ಪುತ್ರನೊಂದಿಗೆ ಸೋಮವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ತೀರಿಸಲು ಹೋಗಿದ್ದರು.

ಆತ ದೇವರ ಪ್ರಸಾದ ತರಲಿಲ್ಲ ಎಂಬ ಕಾರಣಕ್ಕೆ ಶ್ವೇತಾ ಜಗಳವಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next