Advertisement

ಹಾಲು ಮಾರಿ ಹಣ ಗಳಿಸಿ: ಬಿಪ್ಲಬ್‌

09:35 AM Apr 30, 2018 | Karthik A |

ತ್ರಿಪುರ: ವಿದ್ಯಾವಂತ ಯುವ ಜನರು ಉದ್ಯೋಗಕ್ಕಾಗಿ ಸರಕಾರ ಮತ್ತು ರಾಜಕೀಯ ಪಕ್ಷಗಳ ಬೆನ್ನಿಗೆ ಬೀಳುವ ಬದಲು ಪಾನ್‌ ಅಂಗಡಿಯನ್ನೋ ಅಥವಾ ಹಸು ಸಾಕುವುದನ್ನೋ ಮಾಡಿ ಹಣ ಸಂಪಾದಿಸಬೇಕು. ಹೀಗೆಂದು ಹೇಳಿದ್ದು ತ್ರಿಪುರ ಸಿಎಂ ಬಿಪ್ಲಬ್‌ ದೇಬ್‌. ಎಲ್ಲಾ ಮನೆಗಳಲ್ಲೂ ಹಸು ಸಾಕಬೇಕು.

Advertisement

ಈಗ 1 ಲೀ. ಹಾಲಿಗೆ 50 ರೂ. ಇದೆ. ಯುವಕರು ಹತ್ತಾರು ವರ್ಷ ನಿರುದ್ಯೋಗಿಗಳಾಗಿ ಇರುವ ಬದಲು, ಹಾಲು ಮಾರಿ ಹಣ ಸಂಪಾದಿಸಿದ್ದರೆ, ಈ ವೇಳೆಗಾಗಲೇ ಅವರ ಬ್ಯಾಂಕ್‌ ಖಾತೆಯಲ್ಲಿ 10 ಲಕ್ಷ ರೂ. ಇರುತ್ತಿತ್ತು ಎಂದೂ ಅವರು ಹೇಳಿದ್ದಾರೆ. ತ್ರಿಪುರ ಪಶುವೈದ್ಯಕೀಯ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next