Advertisement

ರಫೇಲ್‌ ಸಂಖ್ಯೆ ಇಳಿಸಿದ್ದು ಏಕೆ?: ಚಿದಂಬರಂ ಪ್ರಶ್ನೆ

12:30 AM Jan 19, 2019 | |

ಹೊಸದಿಲ್ಲಿ: ರಫೇಲ್‌ ವಿಚಾರವನ್ನು ಮತ್ತೆ ಕೆದಕಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ವಾಯು ಪಡೆಯು 126 ರಫೇಲ್‌ ವಿಮಾನಗಳಿಗಾಗಿ ಬೇಡಿಕೆ ಇಟ್ಟಿದ್ದಾಗ, ಅದನ್ನು ನಿರ್ಲಕ್ಷಿಸಿ 36 ವಿಮಾನಗಳನ್ನು ಮಾತ್ರ ಕೊಳ್ಳುವ ಮರು ಒಪ್ಪಂದ ಮಾಡಿಕೊಂಡಿದ್ದೇಕೆ, ಈ ಬಗ್ಗೆ ಕೇಂದ್ರ ಸರಕಾರ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದಾರೆ. ರಫೇಲ್‌ ಸಂಖ್ಯೆ ಇಳಿಮುಖ ಮಾಡಿದ್ದರಿಂದಾಗಿ ಪ್ರತಿ ವಿಮಾನದ ದರ ಶೇ. 41.42ರಷ್ಟು ಹೆಚ್ಚಾಯಿತೆಂದು ಕೆಲ ಮಾಧ್ಯಮಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಈ ಪ್ರಶ್ನೆ ಮಾಡುತ್ತಿರುವುದಾಗಿ ಚಿದಂಬರಂ ತಿಳಿಸಿದ್ದಾರೆ.

Advertisement

ಇದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಇಲಾಖೆ, ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಕಡತಗಳನ್ನೂ ಪರಿಶೀಲಿಸಲು ಸಿಎಜಿಗೆ ಮುಕ್ತ ಅವಕಾಶ ನೀಡಿದ್ದೇವೆ ಎಂದು ಹೇಳಿದೆ. ಇದೇ ವೇಳೆ, ಚಿದಂಬರಂ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ, “”ರಫೇಲ್‌ ಒಪ್ಪಂದದ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್‌ ತನ್ನ ಅಭಿಪ್ರಾಯ ಪ್ರಕಟಿಸಿದೆ. ರಕ್ಷಣಾ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಹೀಗಿ ದ್ದರೂ, ಈ ವಿಚಾರವನ್ನು ರಾಜಕೀಯಕ್ಕಾಗಿ ಬಳಸಿಕೊ ಳ್ಳುವವರಿಗೆ “ಈ ದೇಶದ ಜನತೆಗೆ ಎಲ್ಲಾ ಗೊತ್ತಿದೆ’ ಎಂದು ಮಾತ್ರ ನಾನು ಹೇಳಬಯಸುತ್ತೇನೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next