Advertisement

Waqf ಮುಸ್ಲಿಮೇತರರು ಏಕೆ?: ಜೆಪಿಸಿ ಸಭೆಯಲ್ಲಿ ಗದ್ದಲ

01:29 AM Aug 23, 2024 | Team Udayavani |

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆ ಕುರಿತು ದಿಲ್ಲಿಯಲ್ಲಿ ಜಂಟಿ ಸಂಸ ದೀಯ ಮಂಡಳಿ (ಜೆಪಿಸಿ)ಮೊದಲ ಸಭೆ ಗುರುವಾರ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿಗೆ ಹೆಚ್ಚಿನ ಅವಕಾಶ ನೀಡಿದ್ದಕ್ಕೆ ಮತ್ತು ಮಂಡಳಿಯಲ್ಲಿ ಮುಸ್ಲಿಂತೇರರಿಗೆ ಸದಸ್ಯತ್ವ ನೀಡುವುದು ಏಕೆ ಎಂದು ಜೆಪಿಸಿಯಲ್ಲಿ ಇರುವ ವಿಪಕ್ಷಗಳ ಸದಸ್ಯರು ಪ್ರಶ್ನೆ ಮಾಡಿದ್ದಾರೆ.

Advertisement

ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ, ಆಪ್‌ನ ಸಂಜಯ ಸಿಂಗ್‌, ಎಂಐಎಂ ಪಕ್ಷದ ಅಸಾದುದ್ದೀನ್‌ ಒವೈಸಿ, ಡಿಎಂಕೆಯ ಎ.ರಾಜಾ ಮಸೂದೆ ಯಲ್ಲಿರುವ ಹಲವು ಅಂಶಗಳ ಬಗ್ಗೆ ಆಕ್ಷೇಪಗಳನ್ನೆತ್ತಿದ್ದಾರೆ. ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ಸದಸ್ಯರು ಮಸೂದೆ ಯನ್ನು ಸಮರ್ಥಿಸಿದ್ದಾರೆ. ಮಹಿಳೆಯ ರಿಗೆ ಮಂಡಳಿ ಯಲ್ಲಿ ಸದಸ್ಯ ನೀಡುವು ದರಿಂದ ಅವರಿಗೆ ಬಲ ನೀಡಿದಂತೆ ಆಗುತ್ತದೆ ಎಂದು ಹೇಳಿದ್ದಾರೆ. “ಒಟ್ಟು 6 ಗಂಟೆ ಸಭೆ ನಡೆದಿದೆ’ ಎಂದು ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಸಭೆ ಬಳಿಕ ತಿಳಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಸಂಘಟನೆಗಳ ಜತೆಗೆ ಮಸೂದೆಯ ಬಗ್ಗೆ ನಡೆಸಲಾಗುತ್ತದೆ ಎಂದೂ ಹೇಳಿದ್ದಾರೆ. ಎಲ್ಲ 44 ತಿದ್ದುಪಡಿಗಳನ್ನು ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಉತ್ತಮ ಮಸೂದೆಯನ್ನು ತರುತ್ತೇವೆ ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next